ನೀವು ಬಹುಶಃ ಎಂದಾದರೂ ಧ್ಯಾನವನ್ನು ಪ್ರಯತ್ನಿಸಿರಬಹುದು. ಹೆಚ್ಚಿನ ಜನರು ಒತ್ತಡದಿಂದ ಮುಕ್ತಿಪಡೆಯಲು ಧ್ಯಾನ ಮಾಡುತ್ತಾರೆ. ತಮ್ಮ ಮನಸ್ಸನ್ನು ಶಾಂತಗೊಳಿಸುವ ಮಾರ್ಗವಾಗಿ, ಅಥವಾ ತಮ್ಮ ಆರೋಗ್ಯವನ್ನು ಸುಧಾರಿಸುವ ದಾರಿಯಾಗಿ ಇದನ್ನು ಬಳಸುತ್ತಾರೆ.
ಆದರೆ ನಾನು 'ಅನಧ್ಯಾನದ' ಬಗ್ಗೆ ಮಾತನಾಡುತ್ತಿದ್ದೇನೆ! ಹಾಗೆಂದರೇನು ಎಂದು ನೀವು ಆಶ್ಚರ್ಯಪಡುತ್ತಿರಬಹುದು. ನೀವು ಅದನ್ನು ತಕ್ಷಣವೇ ಗುರುತಿಸದಿದ್ದರೂ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಅದನ್ನು ನೀವು ಮಾಡುತ್ತಿದ್ದೀರಿ ಎಂಬುದು ನನಗೆ ಖಚಿತವಿದೆ. ಅದನ್ನೇ ವಿವರಿಸಲು ನಾನು ಹೊರಟಿದ್ದೇನೆ.
ಆದರೆ ನಾನು 'ಅನಧ್ಯಾನದ' ಬಗ್ಗೆ ಮಾತನಾಡುತ್ತಿದ್ದೇನೆ! ಹಾಗೆಂದರೇನು ಎಂದು ನೀವು ಆಶ್ಚರ್ಯಪಡುತ್ತಿರಬಹುದು. ನೀವು ಅದನ್ನು ತಕ್ಷಣವೇ ಗುರುತಿಸದಿದ್ದರೂ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಅದನ್ನು ನೀವು ಮಾಡುತ್ತಿದ್ದೀರಿ ಎಂಬುದು ನನಗೆ ಖಚಿತವಿದೆ. ಅದನ್ನೇ ವಿವರಿಸಲು ನಾನು ಹೊರಟಿದ್ದೇನೆ.
ನಾವೆಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾದ 'ಒತ್ತಡ' (ಅಂದರೆ stress) ದಿಂದ ಪ್ರಾರಂಭಿಸೋಣ. ಬೇರೆ ಬೇರೆ ಜನರಿಗೆ ಒತ್ತಡಕ್ಕೆ ಒಳಗಾಗಲು ಬೇರೆ ಬೇರೆ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದರ ಮೂಲ ಜೈವಿಕ ಪ್ರಕ್ರಿಯೆಯು ಬಹುತೇಕ ಒಂದೇ ಆಗಿರುತ್ತದೆ. ಮುಂದುವರೆಯುವ ಮೊದಲು, ಒತ್ತಡಕ್ಕೆ ಕಾರಣವಾಗುವ ಈ ಮೂಲ ಪ್ರಕ್ರಿಯೆಯನ್ನು ಸ್ವಲ್ಪ ವಿವರವಾಗಿ ನೋಡೋಣ.
ಒತ್ತಡವು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಸಂಭವಿಸುತ್ತದೆ. ಒಂದು ಪ್ರಾಣಿಯು ತನ್ನತ್ತ ವೇಗವಾಗಿ ಬರುತ್ತಿರುವ ವೈರಿಯನ್ನು ನೋಡಿದಾಗ, ಅದರ ಕಣ್ಣುಗಳು ಆ ವೈರಿಯ ಸರಣಿ ಚಿತ್ರಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ಚಿತ್ರಗಳು ಅಪಾಯವು ಎಷ್ಟು ಹತ್ತಿರದಲ್ಲಿದೆ, ಅದು ಎಷ್ಟು ವೇಗವಾಗಿ ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತವೆ.
ಕಣ್ಣುಗಳು ಈ ಚಿತ್ರಗಳನ್ನು ಒಂದೊಂದಾಗಿ ಮೆದುಳಿಗೆ ರವಾನಿಸುತ್ತವೆ, ಹಳೆಯ ಕಾಲದ ಮೂವಿ ರೋಲ್ನ ಚಿತ್ರಗಳಂತೆ. ಮೆದುಳು ಈ ಚಿತ್ರಗಳನ್ನು ತ್ವರಿತವಾಗಿ ವಿಶ್ಲೇಷಿಸಬೇಕು ಮತ್ತು ಅಪಾಯದ ಪ್ರಮಾಣವನ್ನು ಅಂದಾಜಿಸಬೇಕು.
ಈ ಪ್ರತಿಯೊಂದು ಚಿತ್ರವೂ ಮೆದುಳಿನಲ್ಲಿ ನರಕೋಶಗಳ ಸಮೂಹವಾಗಿ ಸಂಕೇತಿಸಲ್ಪಡುತ್ತದೆ. ಮತ್ತು ಈ ಚಿತ್ರಗಳ ಒಂದು ಸಾಲೇ ಇರುತ್ತದೆ, ಅವು ಒಂದಾದ ನಂತರ ಒಂದರಂತೆ ಬರುತ್ತಿರುತ್ತವೆ. ವೈರಿಯು ಹತ್ತಿರ ಬರುತ್ತಿದ್ದಂತೆ ಈ ಸೆರೆಹಿಡಿಯಲಾದ ಚಿತ್ರಗಳು ಬದಲಾಗುತ್ತಿರುತ್ತವೆ. ಅಂತೆಯೇ, ನಡೆಯುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಮೆದುಳಿನ ಪ್ರತಿಕ್ರಿಯೆಯೂ ಬದಲಾಗುತ್ತದೆ.
ಪ್ರಾಣಿಯು ವೈರಿಯ ದಾಳಿಯನ್ನು ಹಿಮ್ಮೆಟ್ಟಿಸಬೇಕು ಅಥವಾ ಆ ಸ್ಥಳದಿಂದ ಓಡಿಹೋಗಬೇಕು. ಇದನ್ನೇ 'ಫೈಟ್ ಅಥವಾ ಫ್ಲೈಟ್' ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ಇವೆರಡರಲ್ಲಿ ಯಾವುದನ್ನೇ ಮಾಡಬೇಕಾದರೂ, ದೇಹದ ಕೈಕಾಲುಗಳಲ್ಲಿ ಹೆಚ್ಚಿನ ಶಕ್ತಿ ಇರಬೇಕಾಗುತ್ತದೆ. ಹೆಚ್ಚಿನ ಶಕ್ತಿಯ ಅಗತ್ಯವನ್ನು ಆ ಭಾಗಗಳಿಗೆ ಹೆಚ್ಚಿನ ರಕ್ತದ ಹರಿವಿನ ಮೂಲಕ ಪೂರೈಸಲಾಗುತ್ತದೆ.
ಸ್ನಾಯುಗಳಿಗೆ ಅಗತ್ಯವಾದ ರಕ್ತವನ್ನು ಪಂಪ್ ಮಾಡಲು ಹೃದಯ ಬಡಿತ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಹೃದಯ ಬಡಿತಕ್ಕೆ ಅನುಗುಣವಾಗಿ ಉಸಿರಾಟದ ದರವೂ ಹೆಚ್ಚಾಗುತ್ತದೆ. ಇದೆಲ್ಲ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ನಂತಹ ದೇಹದ ಹಾರ್ಮೋನ್ಗಳ ಸರಣಿಯ ಸ್ವಯಂಚಾಲಿತ ಸ್ರವಿಸುವಿಕೆಯಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಶತ್ರುವಿನ ಚಲನವಲನಗಳನ್ನು ಗಮನಿಸಲು ಮೆದುಳು ಕೂಡ ಬಹಳ ಜಾಗರೂಕವಾಗಿರಬೇಕಾಗುತ್ತದೆ.
ಮೆದುಳಿನ ನರಕೋಶಗಳ ಈ ಕ್ಷಿಪ್ರ ಚಟುವಟಿಕೆ, ಮತ್ತು ವೇಗವಾಗಿ ಬದಲಾಗುವ ಗಮನವೇ ಪ್ರಾಣಿಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ಹಾರ್ಮೋನ್ಗಳ ಸ್ರವಿಸುವಿಕೆಯು ಪ್ರಾಣಿಯನ್ನು ಅಪಾಯವನ್ನು ಎದುರಿಸಲು ಸಿದ್ಧಪಡಿಸುತ್ತದೆ.
ಇದು ಕೆಳಹಂತದ ಜೀವಿಯೊಂದರ ಒತ್ತಡದ ಸನ್ನಿವೇಶ. ಇದರ ಮೂಲ ಕಾರಣ ಹೆಚ್ಚಾಗಿ ದೈಹಿಕ ಭೀತಿಯಾಗಿರುತ್ತದೆ. ಆದರೆ ಮನುಷ್ಯನಂತಹ ಉನ್ನತ ಮಟ್ಟದ ಜೀವಿ, ಮಾನಸಿಕ ಒತ್ತಡಕ್ಕೆ ಒಳಗಾದಾಗಲೂ ಇದೇ ಮಾದರಿಯು ಪುನರಾವರ್ತನೆಯಾಗುತ್ತದೆ. ಏಕೆಂದರೆ, ಎರಡೂ ಸಂದರ್ಭಗಳಲ್ಲಿ ನರಕೋಶಗಳ ಚಟುವಟಿಕೆ ಹೆಚ್ಚಾಗಿರುತ್ತದೆ, ಮತ್ತು ಗಮನವು ನಿರಂತರವಾಗಿ ಬದಲಾಗುತ್ತಿರುತ್ತದೆ.
ನಮ್ಮ ಆಲೋಚನೆಗಳು ಮೆದುಳಿನಲ್ಲಿ ನರಕೋಶಗಳ ಚಟುವಟಿಕೆಯಾಗಿ ಸಂಕೇತಿಸಲ್ಪಡುತ್ತವೆ. ಮತ್ತು ಈ ಆಲೋಚನೆಗಳಿಗೆ ಒಂದು ವಿಶಿಷ್ಟ ಗುಣವಿದೆ, ಅದೇನೆಂದರೆ ಅವು ವೇಗವಾಗಿ ದ್ವಿಗುಣಗೊಳ್ಳುತ್ತವೆ. ಈ ಆಲೋಚನೆಗಳು ತಮ್ಮ ಚಟುವಟಿಕೆಯನ್ನು ನಡೆಸಲು ಮೆದುಳಿನ ವಿವಿಧ ಭಾಗಗಳನ್ನು ಸಂಪರ್ಕಿಸಬೇಕಾಗುತ್ತದೆ.
ನಮ್ಮ ಮೆದುಳಿನಲ್ಲಿರುವ ಗಮನ ಕೇಂದ್ರವೇ ಮೆದುಳಿನಲ್ಲಿ ಅಗತ್ಯವಾದ ಮಾರ್ಗಗಳನ್ನು ರೂಪಿಸುತ್ತದೆ. ಆದ್ದರಿಂದ, ಈ ಪ್ರತಿಯೊಂದು ಆಲೋಚನೆಯೂ ಮೆದುಳಿನ ಗಮನ ಕೇಂದ್ರವನ್ನು ಸೆಳೆಯುತ್ತದೆ.
ಆಲೋಚನೆಗಳು ಅನೇಕವಾಗಿರಬಹುದಾದ್ದರಿಂದ, ಹಾಗೂ ಅವೆಲ್ಲವೂ ಏಕಕಾಲದಲ್ಲಿ ಸಂಭವಿಸುವುದರಿಂದ, ಈ ಸ್ಪರ್ಧಾತ್ಮಕ ಆಲೋಚನೆಗಳ ನಡುವೆ ಗಮನ ಕೇಂದ್ರವು ತಲ್ಲಣಗೊಳ್ಳಬಹುದು.
ಈಗ, ಮಿದುಳಿನಲ್ಲಿ ಹೊರಗಿನ ಆಕ್ರಮಣಕಾರನ ದಾಳಿಯಂತಹುದೇ ಪರಿಸ್ಥಿತಿ ಉಂಟಾಗುತ್ತದೆ. ಕಾರಣ ಬೇರೆಯಾಗಿರಬಹುದು, ಆದರೆ ಮೆದುಳಿನೊಳಗಿನ ಸನ್ನಿವೇಶ ಮಾತ್ರ ಒಂದೇ ಆಗಿರುತ್ತದೆ. ಸಹಜವಾಗಿಯೇ ಇದು ಹಾರ್ಮೋನ್ಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಅಲ್ಲಿ ದೈಹಿಕವಾಗಿ 'ಓಡಿಹೋಗುವ ಅಥವಾ ಹೋರಾಡುವ' ನಿಜವಾದ ಅಗತ್ಯವಿಲ್ಲದಿದ್ದರೂ ಸಹ.
ಆದರೆ ಈ ಹಾರ್ಮೋನ್ಗಳು ದೀರ್ಘಕಾಲದವರೆಗೆ ಸ್ರವಿಸುತ್ತಿದ್ದರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಕೇವಲ ತುರ್ತು ಕ್ರಮಗಳಿಗಾಗಿ ಮಾತ್ರ ಇವೆ. ಹಾಗಾಗಿ ದೀರ್ಘಕಾಲದ ಮಾನಸಿಕ ಒತ್ತಡವು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಧ್ಯಾನವು ಹೇಗೆ ಸಹಾಯ ಮಾಡುತ್ತದೆ?
ನೀವು ಧ್ಯಾನ ಮಾಡುವಾಗ ಏನು ಮಾಡುತ್ತೀರಿ? ನೀವು ನಿಮ್ಮ ಗಮನವನ್ನು ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತೀರಿ. ನೀವು ನಿಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋದಂತೆ ಹೀಗೆ ಸಂಭವಿಸುತ್ತದೆ:
ಹೀಗೆ ಧ್ಯಾನವು ಆಲೋಚನೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ಅಂತಿಮವಾಗಿ ಮನಸ್ಸನ್ನು ಶಾಂತಗೊಳಿಸುತ್ತದೆ. ಶಾಂತ ಮನಸ್ಸು ಎಂದರೆ ಕಡಿಮೆ ಒತ್ತಡ.
ಶಾಂತ ಮನಸ್ಸು ನಿಮ್ಮನ್ನು ಒತ್ತಡದ ಹಾನಿಕಾರಕ ಪರಿಣಾಮಗಳಿಂದ ಮುಕ್ತಗೊಳಿಸುತ್ತದೆ. ಧ್ಯಾನದ ಅಭ್ಯಾಸವು ಒಂದು ನಿರ್ದಿಷ್ಟ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಉತ್ತಮವಾಗಿ ಕೇಂದ್ರೀಕರಿಸುವ ಸಾಮರ್ಥ್ಯ ಎಂದರೆ ನೀವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡುವುದು. ಆ ರೀತಿಯಲ್ಲಿ, ಧ್ಯಾನವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತದೆ:
ಧ್ಯಾನವು ಏನು ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇದು ಸಂಕ್ಷಿಪ್ತ ವಿವರಣೆ.
ಆದರೆ ಈ ದಿನಗಳಲ್ಲಿ, ನಾವೆಲ್ಲರೂ ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಗೆ ಒಳಗಾಗುತ್ತಿದ್ದೇವೆ. ನಮ್ಮಲ್ಲಿ ಅನೇಕರು ಸಾಮಾಜಿಕ ಮಾಧ್ಯಮಗಳನ್ನು ನೋಡುವುದಕ್ಕೆ ವ್ಯಸನಿಯಾಗಿದ್ದೇವೆ - ಯೂಟ್ಯೂಬ್ ಶಾರ್ಟ್ಸ್, ವಾಟ್ಸಾಪ್ ಸಂದೇಶಗಳು, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ.
ಸ್ವಲ್ಪ ಮಟ್ಟದ ಸಾಮಾಜಿಕ ಮಾಧ್ಯಮದ ಬಳಕೆ ಕೆಟ್ಟದ್ದೇನಲ್ಲ. ಅದು ಪ್ರಯೋಜನಕಾರಿಯೂ ಆಗಿರಬಹುದು. ಆದರೆ ನೀವು 'ಕ್ಲಿಕ್ ಬೇಯ್ಟ್'ಗಳ ಗುಲಾಮರಾದಾಗ ಏನಾಗುತ್ತದೆ?
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಹೆಚ್ಚಿನ ವಿಷಯಗಳು ಜ್ಞಾನವರ್ಧಕಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿರುತ್ತವೆ. ಈ ವಿಷಯಗಳ ಸೃಷ್ಟಿಕರ್ತರು ಯಾವುದೇ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಗಮನವನ್ನು ಸೆಳೆಯಲು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ, ಅಂತಹ ವಿಷಯಗಳು ನಿಮಗೆ ಉಪಯುಕ್ತವಲ್ಲದ ಮಾಹಿತಿಯ ಪ್ರವಾಹವನ್ನೇ ಹರಿಸುತ್ತವೆ. ಇದಲ್ಲದೆ, ಉಂಟಾಗುವ ಆಲೋಚನೆಗಳ ವೇಗಕ್ಕೆ ಅನುಗುಣವಾಗಿ ಗಮನವು ತೀವ್ರವಾಗಿ ಬದಲಾಗುತ್ತಿರುತ್ತದೆ.
ನಮ್ಮ ಮೆದುಳು ಇಂತಹ ಕ್ಷಿಪ್ರ ಚಟುವಟಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಅದರ ಫಲಿತಾಂಶವೆಂದರೆ:
ನಿಜವಾಗಿ ನೀವು ಧ್ಯಾನಕ್ಕೆ ವಿರುದ್ಧವಾದದ್ದನ್ನು ಮಾಡುತ್ತಿದ್ದೀರಿ. ಒಂದು ಗುರಿಯ ಮೇಲೆ ತೀವ್ರವಾಗಿ ಗಮನ ಕೇಂದ್ರೀಕರಿಸುವ ಬದಲು, ನೀವು ಆಲೋಚನೆಗಳ ವೇಗದ ಹರಿವನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದೀರಿ. ಈ ಅತಿಯಾದ ಮಾಧ್ಯಮ ಬಳಕೆ ಅಂತಿಮವಾಗಿ ಮೆದುಳಿನ ಏಕಾಗ್ರತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಮತ್ತು ಅದು ನಿಮ್ಮ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಪಡಿಸಬಹುದು.
ಈ ಎರಡು ಸಂದರ್ಭಗಳನ್ನು ಹೋಲಿಸಿ ನೋಡಿ.
ನೀವು ಧ್ಯಾನ ಮಾಡುವಮೊದಲು, ನಿಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಹರಿತಗೊಳಿಸುವ ಮೂಲಕ ನಿಮ್ಮನ್ನು ಎಚ್ಚರಿಕೆಯಿಂದ ಸಿದ್ಧಪಡಿಸಿಕೊಳ್ಳುತ್ತೀರಿ. ಮತ್ತು ಆ ಏಕಾಗ್ರ ಮನಸ್ಸನ್ನು ಒಂದೇ ಗುರಿಯ ಮೇಲೆ ಅನ್ವಯಿಸುತ್ತೀರಿ. ನೀವು ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋಗುತ್ತೀರಿ ಮತ್ತು ಅದನ್ನು ಹರಿತಗೊಳಿಸುತ್ತೀರಿ. ಇದರ ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ. ಒತ್ತಡದ ಕಾರಣಗಳು ಕ್ರಮೇಣ ದೂರವಾಗುತ್ತವೆ.
ಆದರೆ ನಿರಂತರವಾಗಿ ಬದಲಾಗುವ, ಅಸ್ತವ್ಯಸ್ತವಾಗಿರುವ ಮಾಹಿತಿಯ ಮೇಲೆ ಮನಸ್ಸನ್ನು ಅತಿಯಾಗಿ ಕೇಂದ್ರೀಕರಿಸಲು ಪ್ರಯತ್ನಿಸಿದಾಗ, ಇದಕ್ಕೆ ತದ್ವಿರುದ್ಧವಾದುದು ಸಂಭವಿಸುತ್ತದೆ.
ನಾನು ಇದನ್ನೇ 'ಅನಧ್ಯಾನ' ಎಂದು ಕರೆಯುತ್ತೇನೆ.
ಆದ್ದರಿಂದ, ಅನಧ್ಯಾನ ಮಾಡಬೇಡಿ. ಹಾಗೆ ಮಾಡಿದರೆ ನೀವು ನಿಮ್ಮ ಮೆದುಳಿಗೆ ದೊಡ್ಡ ಹಾನಿ ಮಾಡುತ್ತೀರಿ. ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಬಳಸಿ. ಕ್ಲಿಕ್ ಬೇಯ್ಟ್ಗಳಿಗೆ ಬಲಿಯಾಗಬೇಡಿ.
ಒತ್ತಡವು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಸಂಭವಿಸುತ್ತದೆ. ಒಂದು ಪ್ರಾಣಿಯು ತನ್ನತ್ತ ವೇಗವಾಗಿ ಬರುತ್ತಿರುವ ವೈರಿಯನ್ನು ನೋಡಿದಾಗ, ಅದರ ಕಣ್ಣುಗಳು ಆ ವೈರಿಯ ಸರಣಿ ಚಿತ್ರಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ಚಿತ್ರಗಳು ಅಪಾಯವು ಎಷ್ಟು ಹತ್ತಿರದಲ್ಲಿದೆ, ಅದು ಎಷ್ಟು ವೇಗವಾಗಿ ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತವೆ.
ಕಣ್ಣುಗಳು ಈ ಚಿತ್ರಗಳನ್ನು ಒಂದೊಂದಾಗಿ ಮೆದುಳಿಗೆ ರವಾನಿಸುತ್ತವೆ, ಹಳೆಯ ಕಾಲದ ಮೂವಿ ರೋಲ್ನ ಚಿತ್ರಗಳಂತೆ. ಮೆದುಳು ಈ ಚಿತ್ರಗಳನ್ನು ತ್ವರಿತವಾಗಿ ವಿಶ್ಲೇಷಿಸಬೇಕು ಮತ್ತು ಅಪಾಯದ ಪ್ರಮಾಣವನ್ನು ಅಂದಾಜಿಸಬೇಕು.
ಈ ಪ್ರತಿಯೊಂದು ಚಿತ್ರವೂ ಮೆದುಳಿನಲ್ಲಿ ನರಕೋಶಗಳ ಸಮೂಹವಾಗಿ ಸಂಕೇತಿಸಲ್ಪಡುತ್ತದೆ. ಮತ್ತು ಈ ಚಿತ್ರಗಳ ಒಂದು ಸಾಲೇ ಇರುತ್ತದೆ, ಅವು ಒಂದಾದ ನಂತರ ಒಂದರಂತೆ ಬರುತ್ತಿರುತ್ತವೆ. ವೈರಿಯು ಹತ್ತಿರ ಬರುತ್ತಿದ್ದಂತೆ ಈ ಸೆರೆಹಿಡಿಯಲಾದ ಚಿತ್ರಗಳು ಬದಲಾಗುತ್ತಿರುತ್ತವೆ. ಅಂತೆಯೇ, ನಡೆಯುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಮೆದುಳಿನ ಪ್ರತಿಕ್ರಿಯೆಯೂ ಬದಲಾಗುತ್ತದೆ.
ಪ್ರಾಣಿಯು ವೈರಿಯ ದಾಳಿಯನ್ನು ಹಿಮ್ಮೆಟ್ಟಿಸಬೇಕು ಅಥವಾ ಆ ಸ್ಥಳದಿಂದ ಓಡಿಹೋಗಬೇಕು. ಇದನ್ನೇ 'ಫೈಟ್ ಅಥವಾ ಫ್ಲೈಟ್' ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ಇವೆರಡರಲ್ಲಿ ಯಾವುದನ್ನೇ ಮಾಡಬೇಕಾದರೂ, ದೇಹದ ಕೈಕಾಲುಗಳಲ್ಲಿ ಹೆಚ್ಚಿನ ಶಕ್ತಿ ಇರಬೇಕಾಗುತ್ತದೆ. ಹೆಚ್ಚಿನ ಶಕ್ತಿಯ ಅಗತ್ಯವನ್ನು ಆ ಭಾಗಗಳಿಗೆ ಹೆಚ್ಚಿನ ರಕ್ತದ ಹರಿವಿನ ಮೂಲಕ ಪೂರೈಸಲಾಗುತ್ತದೆ.
ಸ್ನಾಯುಗಳಿಗೆ ಅಗತ್ಯವಾದ ರಕ್ತವನ್ನು ಪಂಪ್ ಮಾಡಲು ಹೃದಯ ಬಡಿತ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಹೃದಯ ಬಡಿತಕ್ಕೆ ಅನುಗುಣವಾಗಿ ಉಸಿರಾಟದ ದರವೂ ಹೆಚ್ಚಾಗುತ್ತದೆ. ಇದೆಲ್ಲ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ನಂತಹ ದೇಹದ ಹಾರ್ಮೋನ್ಗಳ ಸರಣಿಯ ಸ್ವಯಂಚಾಲಿತ ಸ್ರವಿಸುವಿಕೆಯಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಶತ್ರುವಿನ ಚಲನವಲನಗಳನ್ನು ಗಮನಿಸಲು ಮೆದುಳು ಕೂಡ ಬಹಳ ಜಾಗರೂಕವಾಗಿರಬೇಕಾಗುತ್ತದೆ.
ಮೆದುಳಿನ ನರಕೋಶಗಳ ಈ ಕ್ಷಿಪ್ರ ಚಟುವಟಿಕೆ, ಮತ್ತು ವೇಗವಾಗಿ ಬದಲಾಗುವ ಗಮನವೇ ಪ್ರಾಣಿಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ಹಾರ್ಮೋನ್ಗಳ ಸ್ರವಿಸುವಿಕೆಯು ಪ್ರಾಣಿಯನ್ನು ಅಪಾಯವನ್ನು ಎದುರಿಸಲು ಸಿದ್ಧಪಡಿಸುತ್ತದೆ.
ಇದು ಕೆಳಹಂತದ ಜೀವಿಯೊಂದರ ಒತ್ತಡದ ಸನ್ನಿವೇಶ. ಇದರ ಮೂಲ ಕಾರಣ ಹೆಚ್ಚಾಗಿ ದೈಹಿಕ ಭೀತಿಯಾಗಿರುತ್ತದೆ. ಆದರೆ ಮನುಷ್ಯನಂತಹ ಉನ್ನತ ಮಟ್ಟದ ಜೀವಿ, ಮಾನಸಿಕ ಒತ್ತಡಕ್ಕೆ ಒಳಗಾದಾಗಲೂ ಇದೇ ಮಾದರಿಯು ಪುನರಾವರ್ತನೆಯಾಗುತ್ತದೆ. ಏಕೆಂದರೆ, ಎರಡೂ ಸಂದರ್ಭಗಳಲ್ಲಿ ನರಕೋಶಗಳ ಚಟುವಟಿಕೆ ಹೆಚ್ಚಾಗಿರುತ್ತದೆ, ಮತ್ತು ಗಮನವು ನಿರಂತರವಾಗಿ ಬದಲಾಗುತ್ತಿರುತ್ತದೆ.
ನಮ್ಮ ಆಲೋಚನೆಗಳು ಮೆದುಳಿನಲ್ಲಿ ನರಕೋಶಗಳ ಚಟುವಟಿಕೆಯಾಗಿ ಸಂಕೇತಿಸಲ್ಪಡುತ್ತವೆ. ಮತ್ತು ಈ ಆಲೋಚನೆಗಳಿಗೆ ಒಂದು ವಿಶಿಷ್ಟ ಗುಣವಿದೆ, ಅದೇನೆಂದರೆ ಅವು ವೇಗವಾಗಿ ದ್ವಿಗುಣಗೊಳ್ಳುತ್ತವೆ. ಈ ಆಲೋಚನೆಗಳು ತಮ್ಮ ಚಟುವಟಿಕೆಯನ್ನು ನಡೆಸಲು ಮೆದುಳಿನ ವಿವಿಧ ಭಾಗಗಳನ್ನು ಸಂಪರ್ಕಿಸಬೇಕಾಗುತ್ತದೆ.
ನಮ್ಮ ಮೆದುಳಿನಲ್ಲಿರುವ ಗಮನ ಕೇಂದ್ರವೇ ಮೆದುಳಿನಲ್ಲಿ ಅಗತ್ಯವಾದ ಮಾರ್ಗಗಳನ್ನು ರೂಪಿಸುತ್ತದೆ. ಆದ್ದರಿಂದ, ಈ ಪ್ರತಿಯೊಂದು ಆಲೋಚನೆಯೂ ಮೆದುಳಿನ ಗಮನ ಕೇಂದ್ರವನ್ನು ಸೆಳೆಯುತ್ತದೆ.
ಆಲೋಚನೆಗಳು ಅನೇಕವಾಗಿರಬಹುದಾದ್ದರಿಂದ, ಹಾಗೂ ಅವೆಲ್ಲವೂ ಏಕಕಾಲದಲ್ಲಿ ಸಂಭವಿಸುವುದರಿಂದ, ಈ ಸ್ಪರ್ಧಾತ್ಮಕ ಆಲೋಚನೆಗಳ ನಡುವೆ ಗಮನ ಕೇಂದ್ರವು ತಲ್ಲಣಗೊಳ್ಳಬಹುದು.
ಈಗ, ಮಿದುಳಿನಲ್ಲಿ ಹೊರಗಿನ ಆಕ್ರಮಣಕಾರನ ದಾಳಿಯಂತಹುದೇ ಪರಿಸ್ಥಿತಿ ಉಂಟಾಗುತ್ತದೆ. ಕಾರಣ ಬೇರೆಯಾಗಿರಬಹುದು, ಆದರೆ ಮೆದುಳಿನೊಳಗಿನ ಸನ್ನಿವೇಶ ಮಾತ್ರ ಒಂದೇ ಆಗಿರುತ್ತದೆ. ಸಹಜವಾಗಿಯೇ ಇದು ಹಾರ್ಮೋನ್ಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಅಲ್ಲಿ ದೈಹಿಕವಾಗಿ 'ಓಡಿಹೋಗುವ ಅಥವಾ ಹೋರಾಡುವ' ನಿಜವಾದ ಅಗತ್ಯವಿಲ್ಲದಿದ್ದರೂ ಸಹ.
ಆದರೆ ಈ ಹಾರ್ಮೋನ್ಗಳು ದೀರ್ಘಕಾಲದವರೆಗೆ ಸ್ರವಿಸುತ್ತಿದ್ದರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಕೇವಲ ತುರ್ತು ಕ್ರಮಗಳಿಗಾಗಿ ಮಾತ್ರ ಇವೆ. ಹಾಗಾಗಿ ದೀರ್ಘಕಾಲದ ಮಾನಸಿಕ ಒತ್ತಡವು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಧ್ಯಾನವು ಹೇಗೆ ಸಹಾಯ ಮಾಡುತ್ತದೆ?
ನೀವು ಧ್ಯಾನ ಮಾಡುವಾಗ ಏನು ಮಾಡುತ್ತೀರಿ? ನೀವು ನಿಮ್ಮ ಗಮನವನ್ನು ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತೀರಿ. ನೀವು ನಿಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋದಂತೆ ಹೀಗೆ ಸಂಭವಿಸುತ್ತದೆ:
- ಮೆದುಳಿನ ಗಮನಕೇಂದ್ರವು ಬಿಡುವಿಲ್ಲದೆ ಕಾರ್ಯನಿರತವಾಗಿರುತ್ತದೆ, ಏಕೆಂದರೆ ನೀವು ಅದನ್ನು ಒಂದು ನಿರ್ದಿಷ್ಟ > ಗುರಿಯ ಮೇಲೆ ತೊಡಗಿಸಿರುತ್ತೀರಿ.
- ಮೆದುಳಿನಲ್ಲಿ ಉತ್ಪನ್ನವಾಗುವ ಆಲೋಚನೆಗಳಿಗೆ ಗಮನ ಸಿಗುವುದಿಲ್ಲ. ಈ ಗಮನವೇ ಮೆದುಳಿನಲ್ಲಿ ಮಾರ್ಗಗಳನ್ನು > ರೂಪಿಸುತ್ತದೆ. ಈ ಮಾರ್ಗಗಳು ಆಲೋಚನೆಗಳಿಗೆ ಮೆದುಳಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲು ಅನುವು > ಮಾಡಿಕೊಡುತ್ತವೆ.
- ಗಮನದಿಂದ ವಂಚಿತವಾದರೆ ಅಗತ್ಯವಾದ ಮಾರ್ಗಗಳು ಸೃಷ್ಠಿಯಾಗುವುದಿಲ್ಲ. ಮಾರ್ಗಗಳೇ ಇಲ್ಲದಿದ್ದರೆ ಆಲೋಚನೆಗಳ > ಚಟುವಟಿಕೆಗಳೂ ಕ್ರಮೇಣ ಕಡಿಮೆಯಾಗುತ್ತವೆ.
- ಸಾಯುತ್ತಿರುವ ಆಲೋಚನೆಗಳು ಹೊಸ ಆಲೋಚನೆಗಳಿಗೆ ಜನ್ಮ ನೀಡಲು ಸಾಧ್ಯವಿಲ್ಲ.
- ಮೆದುಳಿನಲ್ಲಿ ಉತ್ಪನ್ನವಾಗುವ ಆಲೋಚನೆಗಳಿಗೆ ಗಮನ ಸಿಗುವುದಿಲ್ಲ. ಈ ಗಮನವೇ ಮೆದುಳಿನಲ್ಲಿ ಮಾರ್ಗಗಳನ್ನು > ರೂಪಿಸುತ್ತದೆ. ಈ ಮಾರ್ಗಗಳು ಆಲೋಚನೆಗಳಿಗೆ ಮೆದುಳಿನ ವಿವಿಧ ಭಾಗಗಳನ್ನು ಬಳಸಿಕೊಳ್ಳಲು ಅನುವು > ಮಾಡಿಕೊಡುತ್ತವೆ.
- ಗಮನದಿಂದ ವಂಚಿತವಾದರೆ ಅಗತ್ಯವಾದ ಮಾರ್ಗಗಳು ಸೃಷ್ಠಿಯಾಗುವುದಿಲ್ಲ. ಮಾರ್ಗಗಳೇ ಇಲ್ಲದಿದ್ದರೆ ಆಲೋಚನೆಗಳ > ಚಟುವಟಿಕೆಗಳೂ ಕ್ರಮೇಣ ಕಡಿಮೆಯಾಗುತ್ತವೆ.
- ಸಾಯುತ್ತಿರುವ ಆಲೋಚನೆಗಳು ಹೊಸ ಆಲೋಚನೆಗಳಿಗೆ ಜನ್ಮ ನೀಡಲು ಸಾಧ್ಯವಿಲ್ಲ.
ಹೀಗೆ ಧ್ಯಾನವು ಆಲೋಚನೆಗಳನ್ನು ಕಡಿಮೆ ಮಾಡುತ್ತದೆ, ಮತ್ತು ಅಂತಿಮವಾಗಿ ಮನಸ್ಸನ್ನು ಶಾಂತಗೊಳಿಸುತ್ತದೆ. ಶಾಂತ ಮನಸ್ಸು ಎಂದರೆ ಕಡಿಮೆ ಒತ್ತಡ.
ಶಾಂತ ಮನಸ್ಸು ನಿಮ್ಮನ್ನು ಒತ್ತಡದ ಹಾನಿಕಾರಕ ಪರಿಣಾಮಗಳಿಂದ ಮುಕ್ತಗೊಳಿಸುತ್ತದೆ. ಧ್ಯಾನದ ಅಭ್ಯಾಸವು ಒಂದು ನಿರ್ದಿಷ್ಟ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಉತ್ತಮವಾಗಿ ಕೇಂದ್ರೀಕರಿಸುವ ಸಾಮರ್ಥ್ಯ ಎಂದರೆ ನೀವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡುವುದು. ಆ ರೀತಿಯಲ್ಲಿ, ಧ್ಯಾನವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತದೆ:
- ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು
- ಇದು ನಿಮ್ಮ ಮಾನಸಿಕ ಏಕಾಗ್ರತೆಯನ್ನು ಸುಧಾರಿಸುತ್ತದೆ.
ಧ್ಯಾನವು ಏನು ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇದು ಸಂಕ್ಷಿಪ್ತ ವಿವರಣೆ.
ಆದರೆ ಈ ದಿನಗಳಲ್ಲಿ, ನಾವೆಲ್ಲರೂ ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಗೆ ಒಳಗಾಗುತ್ತಿದ್ದೇವೆ. ನಮ್ಮಲ್ಲಿ ಅನೇಕರು ಸಾಮಾಜಿಕ ಮಾಧ್ಯಮಗಳನ್ನು ನೋಡುವುದಕ್ಕೆ ವ್ಯಸನಿಯಾಗಿದ್ದೇವೆ - ಯೂಟ್ಯೂಬ್ ಶಾರ್ಟ್ಸ್, ವಾಟ್ಸಾಪ್ ಸಂದೇಶಗಳು, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ.
ಸ್ವಲ್ಪ ಮಟ್ಟದ ಸಾಮಾಜಿಕ ಮಾಧ್ಯಮದ ಬಳಕೆ ಕೆಟ್ಟದ್ದೇನಲ್ಲ. ಅದು ಪ್ರಯೋಜನಕಾರಿಯೂ ಆಗಿರಬಹುದು. ಆದರೆ ನೀವು 'ಕ್ಲಿಕ್ ಬೇಯ್ಟ್'ಗಳ ಗುಲಾಮರಾದಾಗ ಏನಾಗುತ್ತದೆ?
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಹೆಚ್ಚಿನ ವಿಷಯಗಳು ಜ್ಞಾನವರ್ಧಕಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿರುತ್ತವೆ. ಈ ವಿಷಯಗಳ ಸೃಷ್ಟಿಕರ್ತರು ಯಾವುದೇ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಗಮನವನ್ನು ಸೆಳೆಯಲು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ, ಅಂತಹ ವಿಷಯಗಳು ನಿಮಗೆ ಉಪಯುಕ್ತವಲ್ಲದ ಮಾಹಿತಿಯ ಪ್ರವಾಹವನ್ನೇ ಹರಿಸುತ್ತವೆ. ಇದಲ್ಲದೆ, ಉಂಟಾಗುವ ಆಲೋಚನೆಗಳ ವೇಗಕ್ಕೆ ಅನುಗುಣವಾಗಿ ಗಮನವು ತೀವ್ರವಾಗಿ ಬದಲಾಗುತ್ತಿರುತ್ತದೆ.
ನಮ್ಮ ಮೆದುಳು ಇಂತಹ ಕ್ಷಿಪ್ರ ಚಟುವಟಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಅದರ ಫಲಿತಾಂಶವೆಂದರೆ:
- ಮೆದುಳು ಮಾಹಿತಿಯನ್ನು ಆಳವಿಲ್ಲದ ರೀತಿಯಲ್ಲಿ ಗ್ರಹಿಸಲು ಪ್ರಾರಂಭಿಸುತ್ತದೆ. ಅದು ವಿಷಯಗಳನ್ನು > ಅರ್ಥಮಾಡಿಕೊಳ್ಳುವ ಬದಲು ಕೇವಲ ಮಾದರಿಗಳನ್ನು (patterns) ಹುಡುಕಲು ಪ್ರಾರಂಭಿಸುತ್ತದೆ.
- ಹೆಚ್ಚಿನ ಪ್ರಮಾಣದ, ಸದಾ ಬದಲಾಗುವ ಮಾಹಿತಿಗೆ ಅನುಗುಣವಾಗಿ ಇರಲು, ಮೆದುಳು ಅಲ್ಪಾವಧಿಯಲ್ಲಿ ಗಮನವನ್ನು > ಬದಲಾಯಿಸುವುದನ್ನು ಕಲಿಯುತ್ತದೆ.
- ಇದು ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಗಮನ ಹರಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
- ಮೆದುಳಿನ ಅತಿಯಾದ ಚಟುವಟಿಕೆಯು ಅಂತಿಮವಾಗಿ ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ.
- ಹೆಚ್ಚಿನ ಪ್ರಮಾಣದ, ಸದಾ ಬದಲಾಗುವ ಮಾಹಿತಿಗೆ ಅನುಗುಣವಾಗಿ ಇರಲು, ಮೆದುಳು ಅಲ್ಪಾವಧಿಯಲ್ಲಿ ಗಮನವನ್ನು > ಬದಲಾಯಿಸುವುದನ್ನು ಕಲಿಯುತ್ತದೆ.
- ಇದು ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಗಮನ ಹರಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
- ಮೆದುಳಿನ ಅತಿಯಾದ ಚಟುವಟಿಕೆಯು ಅಂತಿಮವಾಗಿ ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ.
ನಿಜವಾಗಿ ನೀವು ಧ್ಯಾನಕ್ಕೆ ವಿರುದ್ಧವಾದದ್ದನ್ನು ಮಾಡುತ್ತಿದ್ದೀರಿ. ಒಂದು ಗುರಿಯ ಮೇಲೆ ತೀವ್ರವಾಗಿ ಗಮನ ಕೇಂದ್ರೀಕರಿಸುವ ಬದಲು, ನೀವು ಆಲೋಚನೆಗಳ ವೇಗದ ಹರಿವನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದೀರಿ. ಈ ಅತಿಯಾದ ಮಾಧ್ಯಮ ಬಳಕೆ ಅಂತಿಮವಾಗಿ ಮೆದುಳಿನ ಏಕಾಗ್ರತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಮತ್ತು ಅದು ನಿಮ್ಮ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಪಡಿಸಬಹುದು.
ಈ ಎರಡು ಸಂದರ್ಭಗಳನ್ನು ಹೋಲಿಸಿ ನೋಡಿ.
ನೀವು ಧ್ಯಾನ ಮಾಡುವಮೊದಲು, ನಿಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಹರಿತಗೊಳಿಸುವ ಮೂಲಕ ನಿಮ್ಮನ್ನು ಎಚ್ಚರಿಕೆಯಿಂದ ಸಿದ್ಧಪಡಿಸಿಕೊಳ್ಳುತ್ತೀರಿ. ಮತ್ತು ಆ ಏಕಾಗ್ರ ಮನಸ್ಸನ್ನು ಒಂದೇ ಗುರಿಯ ಮೇಲೆ ಅನ್ವಯಿಸುತ್ತೀರಿ. ನೀವು ಗಮನವನ್ನು ತೀಕ್ಷ್ಣಗೊಳಿಸುತ್ತಾ ಹೋಗುತ್ತೀರಿ ಮತ್ತು ಅದನ್ನು ಹರಿತಗೊಳಿಸುತ್ತೀರಿ. ಇದರ ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ. ಒತ್ತಡದ ಕಾರಣಗಳು ಕ್ರಮೇಣ ದೂರವಾಗುತ್ತವೆ.
ಆದರೆ ನಿರಂತರವಾಗಿ ಬದಲಾಗುವ, ಅಸ್ತವ್ಯಸ್ತವಾಗಿರುವ ಮಾಹಿತಿಯ ಮೇಲೆ ಮನಸ್ಸನ್ನು ಅತಿಯಾಗಿ ಕೇಂದ್ರೀಕರಿಸಲು ಪ್ರಯತ್ನಿಸಿದಾಗ, ಇದಕ್ಕೆ ತದ್ವಿರುದ್ಧವಾದುದು ಸಂಭವಿಸುತ್ತದೆ.
- ಹೆಚ್ಚು ಮಾನಸಿಕ ಚಟುವಟಿಕೆ,
- ಹೆಚ್ಚು ಗಮನ ಬದಲಾವಣೆ,
- ಮತ್ತು ಹೆಚ್ಚು ಒತ್ತಡ.
- ನಿಮ್ಮ ಮನಸ್ಸನ್ನು ಮತ್ತೆ ಏಕಾಗ್ರತೆಗೆ ತರುವ ಸಾಮರ್ಥ್ಯವನ್ನೂ ನೀವು ಶಾಶ್ವತವಾಗಿ ಕಳೆದುಕೊಳ್ಳಲೂಬಹುದು.
- ಹೆಚ್ಚು ಗಮನ ಬದಲಾವಣೆ,
- ಮತ್ತು ಹೆಚ್ಚು ಒತ್ತಡ.
- ನಿಮ್ಮ ಮನಸ್ಸನ್ನು ಮತ್ತೆ ಏಕಾಗ್ರತೆಗೆ ತರುವ ಸಾಮರ್ಥ್ಯವನ್ನೂ ನೀವು ಶಾಶ್ವತವಾಗಿ ಕಳೆದುಕೊಳ್ಳಲೂಬಹುದು.
ನಾನು ಇದನ್ನೇ 'ಅನಧ್ಯಾನ' ಎಂದು ಕರೆಯುತ್ತೇನೆ.
ಆದ್ದರಿಂದ, ಅನಧ್ಯಾನ ಮಾಡಬೇಡಿ. ಹಾಗೆ ಮಾಡಿದರೆ ನೀವು ನಿಮ್ಮ ಮೆದುಳಿಗೆ ದೊಡ್ಡ ಹಾನಿ ಮಾಡುತ್ತೀರಿ. ಸಾಮಾಜಿಕ ಮಾಧ್ಯಮವನ್ನು ಮಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಬಳಸಿ. ಕ್ಲಿಕ್ ಬೇಯ್ಟ್ಗಳಿಗೆ ಬಲಿಯಾಗಬೇಡಿ.
--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್ಗಳಿಲ್ಲ, ಕ್ಲಿಕ್ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.
© Dr. King, Swami Satyapriya 2026

No comments:
Post a Comment