
ದಶಕಗಳ ಹಿಂದೆ, ಬೆಂಜಮಿನ್ ಲಿಬೆಟ್ ಎಂಬ ಅಮೆರಿಕಾದ ನರವಿಜ್ಞಾನಿಯೊಬ್ಬರು ಇದನ್ನು ಖಚಿತಪಡಿಸಲು ಪ್ರಯತ್ನಿಸಿದರು. ಅವರು ಕೈಗೊಂಡ ಪ್ರಯೋಗಗಳು ಆಗಿನ ಕಾಲದಲ್ಲಿ ಭಾರಿ ಸಂಚಲನ ಮೂಡಿಸಿದವು, ಮತ್ತು ಇಂದಿಗೂ ನರವಿಜ್ಞಾನಿಗಳ ನಡುವೆ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.
ಅಷ್ಟಕ್ಕೂ ಲಿಬೆಟ್ ಮಾಡಿದ್ದೇನು?
ಅಷ್ಟಕ್ಕೂ ಲಿಬೆಟ್ ಮಾಡಿದ್ದೇನು?
ಲಿಬೆಟ್ ಒಂದು ಅತ್ಯಂತ ಸರಳವಾದ ಪ್ರಯೋಗವನ್ನು ಮಾಡಿದರು. ಆ ಪ್ರಯೋಗದಲ್ಲಿ ಭಾಗಿಯಾದವರಿಗೆ ಅವರ ಸ್ವಂತ ಇಚ್ಛೆಯಿಂದ ಒಂದು ಬಟನ್ ಅನ್ನು ಒತ್ತಲು ಹೇಳಲಾಯಿತು. ಒಂದು ನಿಖರವಾದ ಗಡಿಯಾರವನ್ನು ಬಳಸಿ, ಬಟನ್ ಒತ್ತಲು ಅವರು ನಿರ್ಧರಿಸಿದ ಸಮಯವನ್ನು ದಾಖಲಿಸುವಂತೆ ಅವರಿಗೆ ತಿಳಿಸಲಾಯಿತು. ಹಾಗೆಯೇ, ಬಟನ್ ಅನ್ನು ಅವರು ನಿಜವಾಗಿ ಒತ್ತಿದ ಸಮಯವನ್ನೂ ಗುರುತು ಮಾಡಿಕೊಳ್ಳಲಾಯಿತು.
ಲಿಬೆಟ್ ಮತ್ತೊಂದು ಕೆಲಸ ಮಾಡಿದ್ದರು. ಅವರು ಭಾಗಿದಾರರ ತಲೆಯ ಮೇಲ್ಭಾಗಕ್ಕೆ ಪ್ರೋಬ್ಗಳನ್ನು ಅಳವಡಿಸಿ, ಅವರ ಮೆದುಳಿನೊಳಗಿನ ನಿರ್ದಿಷ್ಟ ವಿದ್ಯುತ್ ಸಂಕೇತಗಳನ್ನು ಅಳೆಯುತ್ತಿದ್ದರು. ಈ ಸಂಕೇತಗಳು ಮಿದುಳು ಯಾವುದೇ ದೈಹಿಕ ಕ್ರಿಯೆಯಲ್ಲಿ ತೊಡಗಲು ತಯಾರಾಗುವುದನ್ನು ಸೂಚಿಸುತ್ತಿದ್ದವು.
ಬಟನ್ ಒತ್ತಲು ನಿರ್ಧರಿಸಿದ ಸಮಯಕ್ಕೂ ಮತ್ತು ಅದನ್ನು ನಿಜವಾಗಿ ಒತ್ತಿದ ಸಮಯಕ್ಕೂ ನಡುವೆ ಸಹಜವಾಗಿಯೇ ಸ್ವಲ್ಪ ಸಮಯದ ವ್ಯತ್ಯಾಸ ಇರಲೇಬೇಕಲ್ಲವೇ. ಅದರಲ್ಲಿ ವಿಚಿತ್ರವೇನೂ ಇಲ್ಲ. ನಮ್ಮ ಮನಸ್ಸಿನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ನಮ್ಮ ದೇಹಕ್ಕೆ ಸ್ವಲ್ಪ ಸಮಯ ಬೇಕೇ ಆಗುತ್ತದೆ.
ಆಶ್ಚರ್ಯವೆಂದರೆ, ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವುದಕ್ಕಿಂತ ಮುಂಚೆಯೇ, ಅವರ ಮೆದುಳು ಬಟನ್ ಒತ್ತುವ ಕಾರ್ಯಕ್ಕೆ ಪೂರಕವಾದ ಸಿದ್ಧತೆನಡೆಸುತ್ತಿತ್ತು. ಹಾಗೆಂದು ಪ್ರೋಬ್ಗಳ ಮೂಲಕ ಮಾಪನ ಮಾಡಿದ ವಿದ್ಯುತ್ ಚಟುವಟಿಕೆಗಳು ತೋರಿಸಿದವು!
ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವ ಮುನ್ನವೇ ಮೆದುಳು ಆ ಕೆಲಸಕ್ಕೆ ಹೇಗೆ ಸಿದ್ಧತೆನಡೆಸಲು ಸಾಧ್ಯ? ಅಥವಾ ಆ ಚಟುವಟಿಕೆಯೇ ಭಾಗಿದಾರರು ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತೇ? ಒಂದು ವೇಳೆ ಅದೇ ನಿಜವಾಗಿದ್ದರೆ, ಭಾಗಿದಾರರು ಅಂದುಕೊಂಡಂತೆ ಅವರು ಸ್ವಂತ ಇಚ್ಛೆಯಿಂದ ಆ ಕೆಲಸವನ್ನು ಮಾಡಿಲ್ಲ ಎಂದರ್ಥ.
ಈ ಪ್ರಯೋಗವು ಅನೇಕ ಚರ್ಚೆಗಳಿಗೆ ಮತ್ತು ಹೊಸ ಸಿದ್ಧಾಂತಗಳಿಗೆ ಕಾರಣವಾಯಿತು. ಅನೇಕ ವಿಜ್ಞಾನಿಗಳು ಸ್ವತಂತ್ರ ಇಚ್ಛೆ ಎಂಬುದು ಇಲ್ಲವೇ ಇಲ್ಲ ಮತ್ತು ಪ್ರತಿಯೊಂದೂ ಸಂಪೂರ್ಣವಾಗಿ ಕಾರಣ-ಚಾಲಿತ ಎಂಬ ತಮ್ಮ ಸಿದ್ಧಾಂತಕ್ಕೆ ಇದನ್ನು ಸಾಕ್ಷಿ ಎಂದೇ ಪರಿಗಣಿಸಿದರು.
ಭಾಗಿದಾರರು ಕೊನೆಯ ಕ್ಷಣದಲ್ಲಿ ತಮ್ಮ ಹಿಂದಿನ ನಿರ್ಧಾರವನ್ನು ಬದಲಾಯಿಸಲು ಸಮರ್ಥರಿದ್ದರು ಎಂದು ಸ್ವತಃ ಲಿಬೆಟ್ ಅವರೇ ದೃಢಪಡಿಸಿದ ಹೊರತಾಗಿಯೂ, ಈ ಚರ್ಚೆಗಳು ಮಾತ್ರ ನಿಲ್ಲಲಿಲ್ಲ.
ಸ್ವತಂತ್ರ ಇಚ್ಛೆ ಎಂಬುದು ನರವಿಜ್ಞಾನಿಗಳಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. ಒಂದು ವೇಳೆ ಅವರು ಅಂತಹದ್ದನ್ನು ಒಪ್ಪಿಕೊಂಡರೆ, ಅದು "ಪೆಟ್ಟಿಗೆಯೊಳಗಿನ ದೆವ್ವದಂತಹ" ಸಿದ್ಧಾಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಭಾವಿಸುತ್ತಾರೆ.
ಅಂದರೆ, ನಮ್ಮ ಮನಸ್ಸನ್ನು ಆಳುವ, ಮೆದುಳನ್ನು ಮೀರಿದ ಯಾವುದೋ ಒಂದು ರಹಸ್ಯ ಶಕ್ತಿ ಇದೆ ಎಂಬುದನ್ನು ಒಪ್ಪಿಕೊಂಡಂತೆ. ನಮ್ಮ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಚೇತನ ಅಥವಾ ಆತ್ಮವಿದೆ ಎಂಬುದನ್ನು ಒಪ್ಪಿಕೊಂಡಂತೆ. ಭೌತಿಕವಲ್ಲದ ಯಾವುದೋ ಒಂದು ಅಸ್ತಿತ್ವವನ್ನು ಒಪ್ಪಿಕೊಂಡಂತೆ.
ಇದು ವಿಜ್ಞಾನದ ಭದ್ರವಾದ ಕೋಟೆಯನ್ನು ಭೇದಿಸಿದಂತಾಗುತ್ತದೆ. ಯಾಕೆಂದರೆ ವಿಜ್ಞಾನ ಅಂತಹ ಯಾವುದೇ ಕಲ್ಪನೆಯನ್ನೂ ಒಪ್ಪುವುದಿಲ್ಲ.
ಒಬ್ಬ ದಾರ್ಶನಿಕನಾಗಿಯೂ ಯೋಚಿಸುವ ನಾನು, ಈ ವಿಷಯದಲ್ಲಿ ತುಸು ಭಿನ್ನವಾದ ನಿಲುವನ್ನು ಹೊಂದಿದ್ದೇನೆ. ನಾನು ಸ್ವತಂತ್ರ ಇಚ್ಛೆಯನ್ನು 'ಇದೆ ಅಥವಾ ಇಲ್ಲ' ಎಂಬ ಬೈನರಿಯಾಗಿ (ಹೌದು/ಅಲ್ಲ ಎಂಬಂತೆ) ನೋಡುವುದಿಲ್ಲ; ಬದಲಿಗೆ ಅದೊಂದು ಸಾಧ್ಯತೆಗಳ ನಿರಂತರ ಸರಣಿ ಎಂದು ಭಾವಿಸುತ್ತೇನೆ. ಇದು ನಿರ್ಜೀವ ವಸ್ತುಗಳು, ಜೀವಿಗಳು, ಮನುಷ್ಯರು, ಈ ಸರಣಿಯ ಅಂತಿಮ ಮಿತಿ , ಇವೆಲ್ಲವನ್ನೂ ಒಳಗೊಳ್ಳುತ್ತದೆ.
ನಾನು ಹೀಗೆ ವಿವರಿಸುತ್ತೇನೆ.
ಒಂದು ಫ್ಯಾನ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.. ಅದು ಚಲಿಸಬಲ್ಲುದು ಅಥವಾ ನಿಶ್ಚಲವಾಗಿರಬಲ್ಲುದು. ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸಲೂ ಬಲ್ಲುದು. ಆದರೆ ಯಾವುದಾದರೂ ಸ್ವಿಚ್ ಆನ್ ಅಥವಾ ಆಫ್ ಮಾಡಿದಾಗ, ಅಥವಾ ರೆಗ್ಯುಲೇಟರ್ ಅನ್ನು ತಿರುಗಿಸಿದಾಗ ಮಾತ್ರ ಅದು ಸಾಧ್ಯ.. ತನ್ನಷ್ಟಕ್ಕೆ ತಾನೇ ಅದು ಏನನ್ನೂ ಮಾಡಲಾರದು. ಸ್ವತಂತ್ರ ಇಚ್ಛೆ ಸಂಪೂರ್ಣವಾಗಿ ಇಲ್ಲದಿರುವುದಕ್ಕೆ ಇದು ಒಂದು ಖಚಿತ ಉದಾಹರಣೆ.
ಈಗ ಒಂದು ಪ್ರಾಣಿಯನ್ನು ನೋಡಿ. ಅದೂ ಸಹ ಚಲಿಸುತ್ತದೆ, ತಿನ್ನುತ್ತದೆ, ಸಂಗಾತಿಯನ್ನು ಹುಡುಕುತ್ತದೆ, ಹೀಗೆ ಏನೇನೋ ಮಾಡುತ್ತದೆ. ಇದೆಲ್ಲವನ್ನೂ ಮಾಡುವಂತೆ ಅದನ್ನು ಪ್ರೇರೇಪಿಸುವ ಯಾವುದೇ ಭೌತಿಕ ಸ್ವಿಚ್ ಅಲ್ಲಿರುವುದಿಲ್ಲ. ಆ ಪ್ರಾಣಿಯು ತನ್ನ ನೈಸರ್ಗಿಕ ಪ್ರವೃತ್ತಿ ಅಥವಾ ತನ್ನ ಮೆದುಳು ಮತ್ತು ದೇಹದಲ್ಲಿ ಸ್ರವಿಸುವ 'ರಾಸಾಯನಿಕಗಳ' ಮೂಲಕ ಚಾಲಿತವಾಗಿರುತ್ತದೆ. ಆ ಪರಿಧಿಯೊಳಗೆ ಅದು ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತದೆ. ಅಂದರೆ ಅದು ಸೀಮಿತ ರೂಪದ 'ಸ್ವತಂತ್ರ ಇಚ್ಛೆ'ಯನ್ನು ಹೊಂದಿದೆ.
ಈಗ ನಾವು ಮನುಷ್ಯರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಮ್ಮಲ್ಲಿ ಅನೇಕರು ಪ್ರವೃತ್ತಿಗಳಿಂದಲೇ ಚಾಲಿತರಾಗಿದ್ದರೂ ಸಹ, ಈ ಪ್ರವೃತ್ತಿಗಳನ್ನು ಮೆಟ್ಟಿನಿಂತು ತಮ್ಮ ಸ್ವಂತ ಇಚ್ಛೆಯಂತೆ ವರ್ತಿಸಬಲ್ಲರು. ನಮಗೆ ಹಸಿವಾದಾಗ ನಾವು ನಾಯಿಯಂತೆ ಆಹಾರದ ಮೇಲೆ ಮುಗಿಬೀಳುವುದಿಲ್ಲ, ಬದಲಿಗೆ ನಮ್ಮ ಮುಂದೆ ಇರುವ ಆಹಾರವನ್ನು ತಿನ್ನುವುದು ಸರಿಯೇ ಎಂದು ಯೋಚಿಸುತ್ತೇವೆ.
ನಮ್ಮ ನಿರ್ಧಾರವನ್ನು ಹಲವು ವಿಷಯಗಳು ನಿಯಂತ್ರಿಸುತ್ತವೆ – ಆ ಆಹಾರ ನಮ್ಮದೇ?, ಅದನ್ನು ತಿನ್ನಲು ಇದು ಸರಿಯಾದ ಸಮಯವೇ?, ಆ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ?, ಮುಂತಾದವು.
ನಾವು ಆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾದರೂ, ನಮ್ಮ ಕ್ರಿಯೆಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿರುವುದಿಲ್ಲ. ಅವುಗಳನ್ನು ನಮ್ಮ ನೈತಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯದ ಕಾಳಜಿ ಇತ್ಯಾದಿಗಳು ನಿಯಂತ್ರಿಸುತ್ತವೆ.
ಆದ್ದರಿಂದ, ನಮ್ಮಲ್ಲಿ ಸ್ವತಂತ್ರ ಇಚ್ಛೆ ಇದ್ದರೂ, ಸ್ವನಿಯಂತ್ರಣವೂ ಇದೆ. ಈ ಸ್ವನಿಯಂತ್ರಣವೂ ಸ್ವತಂತ್ರ ಇಚ್ಛೆಯದ್ದೇ ಇನ್ನೊಂದು ರೂಪ. ಆದು ಒಂದು ನಿರ್ಜೀವ ವಸ್ತುವನ್ನು ಆಳುವ ಭೌತಿಕ ಅಡೆತಡೆಗಳನ್ನು, ಅಥವಾ ಕೆಳಮಟ್ಟದ ಜೀವಿಯನ್ನು ನಿರ್ದೇಶಿಸುವ ಪ್ರವೃತ್ತಿಯ ಒತ್ತಡಗಳನ್ನು ಮೀರಿನಿಲ್ಲಬಲ್ಲದು.
ಇನ್ನೂ ಮುಂದೆ ಹೋಗೋಣ. ಒಬ್ಬ ಸನ್ಯಾಸಿಯನ್ನು ನೋಡಿ. ಅವರು ಆಧ್ಯಾತ್ಮಿಕ ಜ್ಞಾನೋದಯದ ತಮ್ಮ ಅಂತಿಮ ಗುರಿಯನ್ನು ತಲುಪಲು, ತಮ್ಮ ಎಲ್ಲಾ ಮೂಲಭೂತ ಪ್ರವೃತ್ತಿಗಳ ವಿರುದ್ಧ ಹೋರಾಡುತ್ತಾರೆ, ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ತಮ್ಮ ಆಯ್ದ ಮಾರ್ಗದಮೇಲೆ ಧೃಡತೆಯಿಂದ ಸಾಗುತ್ತಾರೆ. ಅವರೂ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಿದ್ದಾರೆ, ಅಲ್ಲವೇ?
ಆದರೆ ಅವರು ಯಾವುದೋ ಒಂದು ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಮೇಲಿನ ನಂಬಿಕೆ ಮತ್ತು ಅದನ್ನು ಪಡೆಯಬೇಕೆಂಬ ತಮ್ಮ ಹಂಬಲಕ್ಕೆ ಕಟ್ಟುಬಿದ್ದಿರುತ್ತಾರೆ. ಆದ್ದರಿಂದ, ಅವರ ನಿರ್ಧಾರಗಳು ಸಂಪೂರ್ಣವಾಗಿ ಸ್ವತಂತ್ರವಾಗಿರುವುದಿಲ್ಲ. ಅದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ.
ತಮ್ಮ ಧರ್ಮವನ್ನು ಪ್ರಚಾರ ಮಾಡುವ ಏಕೈಕ ಗುರಿಯಿಂದ ಎಲ್ಲಾ ಐಹಿಕ ಸುಖಗಳನ್ನು ತ್ಯಜಿಸುವ ಅನೇಕ ಧರ್ಮಪ್ರಚಾರಕರ ಬಗ್ಗೆ ನೀವು ಕೇಳಿರಬಹುದು. ಅವರು ಸ್ವದೇಶವನ್ನು ಬಿಟ್ಟು, ಅಪರಿಚಿತ ದೇಶವೊಂದರಲ್ಲಿ ಸಂನ್ಯಾಸಿಯ ಜೀವನವನ್ನು ನಡೆಸಲು ಆರಿಸಿಕೊಳ್ಳುತ್ತಾರೆ ಮತ್ತು ತಮ್ಮ ಹಾದಿಯಲ್ಲಿ ಶ್ರಮಿಸುತ್ತಾರೆ.
ಆದರೆ ಕೆಲವು ಭಾರಿ, ಜನರ ಬಡತನ ಮತ್ತು ಸಂಕಟಗಳನ್ನು ಕಂಡು ಅವರ ಮನಸ್ಸು ಕರಗುತ್ತದೆ, ಅವರು ತಮ್ಮ ಪ್ರಾಥಮಿಕ ಗುರಿಯನ್ನು ಮರೆತು ಯಾವುದೇ ಧಾರ್ಮಿಕ ಅಜೆಂಡಾ ಇಲ್ಲದೆ ಅವರ ಸೇವೆಮಾಡಲು ಪ್ರಾರಂಭಿಸುತ್ತಾರೆ. ತಮ್ಮನ್ನು ಹಿಡಿದಿಟ್ಟಿರುವ ಎಲ್ಲಾ ಕಾರಣಗಳನ್ನು ಜಯಿಸಿ ಅವರು ಒಂದು ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
ಆದರೂ, ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದ್ದು ಅವರಲ್ಲಿನ ಸಹಾನುಭೂತಿಯೇ ಅಲ್ಲವೇ?.
ಭಾರತದಲ್ಲಿ 'ನಿಷ್ಕಾಮ ಯೋಗಿ'ಗಳ ಪರಂಪರೆಯಿದೆ. ಅವರಿಗೆ ಯಾವುದೇ ಸ್ವಾರ್ಥವಾಗಲೀ ಧಾರ್ಮಿಕ ಅಜೆಂಡಾ ಆಗಲೀ ಇರುವುದಿಲ್ಲ. ಅವರು ಸಹಾನುಭೂತಿಯಿಂದಲೂ ಪ್ರೇರಿತರಾಗಿರುವುದಿಲ್ಲ. ಅವರು ಕೇವಲ ತಮ್ಮ ಕರ್ತವ್ಯ ಎಂಬ ಒಂದೇ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಈ ಆಳವಾದ ಕರ್ತವ್ಯ ಪ್ರಜ್ಞೆಯೇ ಅವರು ಆರಿಸಿಕೊಂಡ ಹಾದಿಗೆ ಕಾರಣವಾಗುತ್ತದೆ.
ಹೀಗೆ, ಈ ಎಲ್ಲಾ ಉದಾಹರಣೆಗಳಲ್ಲಿಯೂ, ಮೇಲ್ನೋಟಕ್ಕೆ ಕಾಣುವ ಸ್ವತಂತ್ರ ಆಯ್ಕೆಯ ಹಿಂದೆ ಯಾವಾಗಲೂ ಒಂದು ಕಾರಣವಿರುತ್ತದೆ. ಯಾವುದೇ ಕಾರಣವಿಲ್ಲದೆ ಯಾರಾದರೂ ಏನನ್ನಾದರೂ ಮಾಡುವುದನ್ನು ನೀವು ಊಹಿಸಬಲ್ಲಿರಾ? ಬಹುಶಃ ಅದು ಸಾಧ್ಯವಿಲ್ಲ.
ಆದರೆ ನೀವು ಪ್ರಾಯಶಃ ಗಮನಿಸಿರದ ಒಂದು ಸೂಕ್ಷ್ಮ ವಿಷಯ ಇಲ್ಲಿದೆ.
ಫ್ಯಾನಿನಂತಹ ನಿರ್ಜೀವ ವಸ್ತುವಿನ ವಿಷಯದಲ್ಲಿ ಕಾರಣವು ಭೌತಿಕವಾಗಿತ್ತು. ಪ್ರಾಣಿಗಳ ವಿಷಯದಲ್ಲಿ ಅದು ರಾಸಾಯನಿಕವಾಗಿತ್ತು. ಸಾಮಾನ್ಯ ಮನುಷ್ಯರಲ್ಲಿ ಅದು ಸಾಮಾಜಿಕ ನಿಯಮಗಳು ಮತ್ತು ಒಪ್ಪಿತ ಮೌಲ್ಯಗಳಾಗಿವೆ. ಆಧ್ಯಾತ್ಮ ಮಾರ್ಗದಲ್ಲಿ ಹೋಗುವವರಿಗೆ ಅವರ ಧೃಡವಾದ ನಂಬುಗೆ; ಸಮಾಜ ಸೇವಕರಲ್ಲಿ ಅದು ಸಹಾನುಭೂತಿ; ಮತ್ತು ಕರ್ಮಯೋಗಿಗಳಲ್ಲಿ ಅದು ಬಲವಾದ ಕರ್ತವ್ಯ ಪ್ರಜ್ಞೆ.
ಪ್ರತಿಯೊಬ್ಬರೂ ಯಾವುದಾದರೂ ಒಂದು ಕಾರಣದಿಂದಲೇ ಚಾಲಿತರಾಗಿದ್ದರು. ಆದರೆ ಈ ಕಾರಣವು ಕ್ರಮೇಣ, ಸ್ಥೂಲದಿಂದ ಸೂಕ್ಷ್ಮದೆಡೆಗೆ ಚಲಿಸುವುದನ್ನು ಕಾಣಬಹುದು.
ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇವರಲ್ಲಿ ಪ್ರತಿಯೊಬ್ಬರೂ ಪ್ರದರ್ಶಿಸಿದ ಸ್ವತಂತ್ರ ಇಚ್ಛೆ ಒಂದೇ ರೀತಿಯದಾಗಿರಲಿಲ್ಲ. ಆ ಇಚ್ಛೆಯ ಹಿಂದಿರುವ ಕಾರಣ ಬೇರೆಬೇರೆ ಸ್ತರದಲ್ಲಿತ್ತು. ಅವರು ಕ್ರಮೇಣ, ಸಂಪೂರ್ಣ ಸ್ವತಂತ್ರ ಇಚ್ಛೆಯ ಮಿತಿಯ ಹತ್ತಿರಕ್ಕೆ ಸರಿಯುತ್ತಿದ್ದಂತೆ ಕಾಣುತ್ತದೆ. ಯಾರೂ ಆ ಮಿತಿಯನ್ನು ತಲುಪದಿದ್ದರೂ ಸಹ.
ಆದ್ದರಿಂದ, ಸ್ವತಂತ್ರ ಇಚ್ಛೆ ಎಂಬುದು 'ಇದೆ ಅಥವಾ ಇಲ್ಲ' ಎಂಬ ಬೈನರಿ ಅಲ್ಲ. ಅದೊಂದು "ಸ್ವಾತಂತ್ರ್ಯದ" ವಿಶಾಲ ಶ್ರೇಣಿ. ಈ ಶ್ರೇಣಿಯ ಕೆಳಮಟ್ಟದಲ್ಲಿ ಇರುವವರ ಸ್ವತಂತ್ರ ಇಚ್ಛೆಯು, ಮೇಲ್ಮಟ್ಟದಲ್ಲಿ ಇರುವವರಿಗಿಂತ ಹೆಚ್ಚು ಸೀಮಿತವಾಗಿರುತ್ತದೆ. ಆದರೂ ಅವರೆಲ್ಲರೂ ವಿವಿಧ ಹಂತಗಳಲ್ಲಿ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಾರೆ.
ಹೌದು, ಆ ರೀತಿಯಲ್ಲಿ ನೋಡಿದರೆ, ನಮ್ಮಲ್ಲಿ ಯಾರಿಗೂ ಸಂಪೂರ್ಣ 'ಸ್ವತಂತ್ರ ಇಚ್ಛೆ' ಎಂಬುದು ಇಲ್ಲ. ಏಕೆಂದರೆ ನಾವೆಲ್ಲರೂ ಕಾರ್ಯಕಾರಣ ಸಂಬಂಧದ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸುತ್ತೇವೆ. ಆ ಚೌಕಟ್ಟಿನೊಳಗೆ ನಮಗೆಲ್ಲರಿಗೂ ಸೀಮಿತ ಪರಿಧಿಯಲ್ಲಿ ಸ್ವತಂತ್ರ ಇಚ್ಛೆ ಎಂಬುದು ಖಂಡಿತವಾಗಿಯೂ ಇದೆ. ಅದರ ಸ್ತರ ಭಿನ್ನವಾಗಿರಬಹುದು.
ಒಂದು ವೇಳೆ ಈ 'ಸ್ವತಂತ್ರ ಇಚ್ಛೆ'ಯ ಶ್ರೇಣಿಗೆ ಒಂದು ಅಂತಿಮ ಮಿತಿ ಇದ್ದರೆ, ಅದು ಹೇಗಿರಬಹುದು? ಆ ಮಿತಿಯಲ್ಲಿ ಇರುವವರು ಕಾರ್ಯಕಾರಣ ಸಂಬಂಧದಿಂದ ಮುಕ್ತರಾಗಿರಬೇಕು. ಅವರು ಯಾವುದೇ ಕಾರಣವಿಲ್ಲದೆ ಕಾರ್ಯನಿರ್ವಹಿಸುತ್ತಾರೆ. ಅವರು ಅನಿಯಂತ್ರಿತ 'ಸ್ವತಂತ್ರ ಇಚ್ಛೆ'ಯನ್ನು ಪ್ರದರ್ಶಿಸುತ್ತಾರೆ.
ಭಾರತೀಯ ತತ್ವಶಾಸ್ತ್ರವು ಅಂತಹ ಒಂದು ಸಾಧ್ಯತೆಯನ್ನು ಕಲ್ಪಿಸುತ್ತದೆ. ಉಪನಿಷತ್ತುಗಳು ಇದನ್ನು 'ಆತ್ಮ' ಎಂದು ಕರೆಯುತ್ತವೆ — ಇದು ಕಾರ್ಯಕಾರಣದ ಪಾಶದಿಂದ ಮುಕ್ತವಾದದ್ದು. ಅಂತಹುದಕ್ಕೆ ಮಾತ್ರ ಸಂಪೂರ್ಣ 'ಸ್ವತಂತ್ರ ಇಚ್ಛೆ' ಇರುತ್ತದೆ.
ಸಾಮಾನ್ಯರ ಭಾಷೆಯಲ್ಲಿ, ಧಾರ್ಮಿಕ ಜನರು ಇದನ್ನು 'ದೇವರು' ಎಂದು ಕರೆಯುತ್ತಾರೆ. ಬೈಬಲಿನಲ್ಲಿ ದೇವರು ಯಾವ ಕಾರಣವೂ ಇಲ್ಲದೇ 'ಬೆಳಕಾಗಲಿ' ಎನ್ನುತ್ತಾನೆ ಮತ್ತು ಬೆಳಕಾಗುತ್ತದೆ. ಅದೇ ದೇವರು ಉಪನಿಷತ್ತಿನಲ್ಲಿ "ನಾನು ಅನೇಕವಾಗಲಿ" ಎನ್ನುತ್ತದೆ, ಮತ್ತು ಅದು ಜಗತ್ತು, ಜೀವಿಗಳು ಇತ್ಯಾದಿ, ಅನೇಕವಾಗುತ್ತದೆ.
ಅಂಥವನೊಬ್ಬನಿದ್ದರೆ ಮಾತ್ರ ಅವನು ಸಂಪೂರ್ಣ ಸ್ವತಂತ್ರ ಇಚ್ಛೆಯಿಂದ ತುಂಬಿರಬಲ್ಲನು. ಉಳಿದವರೆಲ್ಲರ ಸ್ವತಂತ್ರ ಇಚ್ಛೆಯೆಂಬುದು ಸೀಮಿತ. ನಾವು ವಿಕಾಸಹೊಂದಿದಂತೆ ಈ ಸ್ವಾತಂತ್ರ್ಯದ ಸೀಮೆ ವಿಸ್ತರಿಸುತ್ತಾ ಹೋಗುತ್ತದೆ ಅಷ್ಟೇ.
ಆ ಸ್ವತಂತ್ರ ಇಚ್ಛೆಯನ್ನು ಕೆಲವು ಸರಳ ಪ್ರೋಬ್ ಗಳ ಮೂಲಕ ಸಿದ್ಧಪಡಿಸಲಾಗುವುದಿಲ್ಲ. ಅದು ಅಂತರ್ ದೃಷ್ಠಿಯಿಂದಷ್ಟೇ ಕಂಡುಕೊಳ್ಳಬಲ್ಲುದಾಗಿದೆ.
ಲಿಬೆಟ್ ಮತ್ತೊಂದು ಕೆಲಸ ಮಾಡಿದ್ದರು. ಅವರು ಭಾಗಿದಾರರ ತಲೆಯ ಮೇಲ್ಭಾಗಕ್ಕೆ ಪ್ರೋಬ್ಗಳನ್ನು ಅಳವಡಿಸಿ, ಅವರ ಮೆದುಳಿನೊಳಗಿನ ನಿರ್ದಿಷ್ಟ ವಿದ್ಯುತ್ ಸಂಕೇತಗಳನ್ನು ಅಳೆಯುತ್ತಿದ್ದರು. ಈ ಸಂಕೇತಗಳು ಮಿದುಳು ಯಾವುದೇ ದೈಹಿಕ ಕ್ರಿಯೆಯಲ್ಲಿ ತೊಡಗಲು ತಯಾರಾಗುವುದನ್ನು ಸೂಚಿಸುತ್ತಿದ್ದವು.
ಬಟನ್ ಒತ್ತಲು ನಿರ್ಧರಿಸಿದ ಸಮಯಕ್ಕೂ ಮತ್ತು ಅದನ್ನು ನಿಜವಾಗಿ ಒತ್ತಿದ ಸಮಯಕ್ಕೂ ನಡುವೆ ಸಹಜವಾಗಿಯೇ ಸ್ವಲ್ಪ ಸಮಯದ ವ್ಯತ್ಯಾಸ ಇರಲೇಬೇಕಲ್ಲವೇ. ಅದರಲ್ಲಿ ವಿಚಿತ್ರವೇನೂ ಇಲ್ಲ. ನಮ್ಮ ಮನಸ್ಸಿನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ನಮ್ಮ ದೇಹಕ್ಕೆ ಸ್ವಲ್ಪ ಸಮಯ ಬೇಕೇ ಆಗುತ್ತದೆ.
ಆಶ್ಚರ್ಯವೆಂದರೆ, ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವುದಕ್ಕಿಂತ ಮುಂಚೆಯೇ, ಅವರ ಮೆದುಳು ಬಟನ್ ಒತ್ತುವ ಕಾರ್ಯಕ್ಕೆ ಪೂರಕವಾದ ಸಿದ್ಧತೆನಡೆಸುತ್ತಿತ್ತು. ಹಾಗೆಂದು ಪ್ರೋಬ್ಗಳ ಮೂಲಕ ಮಾಪನ ಮಾಡಿದ ವಿದ್ಯುತ್ ಚಟುವಟಿಕೆಗಳು ತೋರಿಸಿದವು!
ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಭಾಗಿದಾರರು ಬಟನ್ ಒತ್ತಲು ನಿರ್ಧರಿಸುವ ಮುನ್ನವೇ ಮೆದುಳು ಆ ಕೆಲಸಕ್ಕೆ ಹೇಗೆ ಸಿದ್ಧತೆನಡೆಸಲು ಸಾಧ್ಯ? ಅಥವಾ ಆ ಚಟುವಟಿಕೆಯೇ ಭಾಗಿದಾರರು ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತೇ? ಒಂದು ವೇಳೆ ಅದೇ ನಿಜವಾಗಿದ್ದರೆ, ಭಾಗಿದಾರರು ಅಂದುಕೊಂಡಂತೆ ಅವರು ಸ್ವಂತ ಇಚ್ಛೆಯಿಂದ ಆ ಕೆಲಸವನ್ನು ಮಾಡಿಲ್ಲ ಎಂದರ್ಥ.
ಈ ಪ್ರಯೋಗವು ಅನೇಕ ಚರ್ಚೆಗಳಿಗೆ ಮತ್ತು ಹೊಸ ಸಿದ್ಧಾಂತಗಳಿಗೆ ಕಾರಣವಾಯಿತು. ಅನೇಕ ವಿಜ್ಞಾನಿಗಳು ಸ್ವತಂತ್ರ ಇಚ್ಛೆ ಎಂಬುದು ಇಲ್ಲವೇ ಇಲ್ಲ ಮತ್ತು ಪ್ರತಿಯೊಂದೂ ಸಂಪೂರ್ಣವಾಗಿ ಕಾರಣ-ಚಾಲಿತ ಎಂಬ ತಮ್ಮ ಸಿದ್ಧಾಂತಕ್ಕೆ ಇದನ್ನು ಸಾಕ್ಷಿ ಎಂದೇ ಪರಿಗಣಿಸಿದರು.
ಭಾಗಿದಾರರು ಕೊನೆಯ ಕ್ಷಣದಲ್ಲಿ ತಮ್ಮ ಹಿಂದಿನ ನಿರ್ಧಾರವನ್ನು ಬದಲಾಯಿಸಲು ಸಮರ್ಥರಿದ್ದರು ಎಂದು ಸ್ವತಃ ಲಿಬೆಟ್ ಅವರೇ ದೃಢಪಡಿಸಿದ ಹೊರತಾಗಿಯೂ, ಈ ಚರ್ಚೆಗಳು ಮಾತ್ರ ನಿಲ್ಲಲಿಲ್ಲ.
ಸ್ವತಂತ್ರ ಇಚ್ಛೆ ಎಂಬುದು ನರವಿಜ್ಞಾನಿಗಳಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. ಒಂದು ವೇಳೆ ಅವರು ಅಂತಹದ್ದನ್ನು ಒಪ್ಪಿಕೊಂಡರೆ, ಅದು "ಪೆಟ್ಟಿಗೆಯೊಳಗಿನ ದೆವ್ವದಂತಹ" ಸಿದ್ಧಾಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಭಾವಿಸುತ್ತಾರೆ.
ಅಂದರೆ, ನಮ್ಮ ಮನಸ್ಸನ್ನು ಆಳುವ, ಮೆದುಳನ್ನು ಮೀರಿದ ಯಾವುದೋ ಒಂದು ರಹಸ್ಯ ಶಕ್ತಿ ಇದೆ ಎಂಬುದನ್ನು ಒಪ್ಪಿಕೊಂಡಂತೆ. ನಮ್ಮ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಚೇತನ ಅಥವಾ ಆತ್ಮವಿದೆ ಎಂಬುದನ್ನು ಒಪ್ಪಿಕೊಂಡಂತೆ. ಭೌತಿಕವಲ್ಲದ ಯಾವುದೋ ಒಂದು ಅಸ್ತಿತ್ವವನ್ನು ಒಪ್ಪಿಕೊಂಡಂತೆ.
ಇದು ವಿಜ್ಞಾನದ ಭದ್ರವಾದ ಕೋಟೆಯನ್ನು ಭೇದಿಸಿದಂತಾಗುತ್ತದೆ. ಯಾಕೆಂದರೆ ವಿಜ್ಞಾನ ಅಂತಹ ಯಾವುದೇ ಕಲ್ಪನೆಯನ್ನೂ ಒಪ್ಪುವುದಿಲ್ಲ.
ಒಬ್ಬ ದಾರ್ಶನಿಕನಾಗಿಯೂ ಯೋಚಿಸುವ ನಾನು, ಈ ವಿಷಯದಲ್ಲಿ ತುಸು ಭಿನ್ನವಾದ ನಿಲುವನ್ನು ಹೊಂದಿದ್ದೇನೆ. ನಾನು ಸ್ವತಂತ್ರ ಇಚ್ಛೆಯನ್ನು 'ಇದೆ ಅಥವಾ ಇಲ್ಲ' ಎಂಬ ಬೈನರಿಯಾಗಿ (ಹೌದು/ಅಲ್ಲ ಎಂಬಂತೆ) ನೋಡುವುದಿಲ್ಲ; ಬದಲಿಗೆ ಅದೊಂದು ಸಾಧ್ಯತೆಗಳ ನಿರಂತರ ಸರಣಿ ಎಂದು ಭಾವಿಸುತ್ತೇನೆ. ಇದು ನಿರ್ಜೀವ ವಸ್ತುಗಳು, ಜೀವಿಗಳು, ಮನುಷ್ಯರು, ಈ ಸರಣಿಯ ಅಂತಿಮ ಮಿತಿ , ಇವೆಲ್ಲವನ್ನೂ ಒಳಗೊಳ್ಳುತ್ತದೆ.
ನಾನು ಹೀಗೆ ವಿವರಿಸುತ್ತೇನೆ.
ಒಂದು ಫ್ಯಾನ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.. ಅದು ಚಲಿಸಬಲ್ಲುದು ಅಥವಾ ನಿಶ್ಚಲವಾಗಿರಬಲ್ಲುದು. ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸಲೂ ಬಲ್ಲುದು. ಆದರೆ ಯಾವುದಾದರೂ ಸ್ವಿಚ್ ಆನ್ ಅಥವಾ ಆಫ್ ಮಾಡಿದಾಗ, ಅಥವಾ ರೆಗ್ಯುಲೇಟರ್ ಅನ್ನು ತಿರುಗಿಸಿದಾಗ ಮಾತ್ರ ಅದು ಸಾಧ್ಯ.. ತನ್ನಷ್ಟಕ್ಕೆ ತಾನೇ ಅದು ಏನನ್ನೂ ಮಾಡಲಾರದು. ಸ್ವತಂತ್ರ ಇಚ್ಛೆ ಸಂಪೂರ್ಣವಾಗಿ ಇಲ್ಲದಿರುವುದಕ್ಕೆ ಇದು ಒಂದು ಖಚಿತ ಉದಾಹರಣೆ.
ಈಗ ಒಂದು ಪ್ರಾಣಿಯನ್ನು ನೋಡಿ. ಅದೂ ಸಹ ಚಲಿಸುತ್ತದೆ, ತಿನ್ನುತ್ತದೆ, ಸಂಗಾತಿಯನ್ನು ಹುಡುಕುತ್ತದೆ, ಹೀಗೆ ಏನೇನೋ ಮಾಡುತ್ತದೆ. ಇದೆಲ್ಲವನ್ನೂ ಮಾಡುವಂತೆ ಅದನ್ನು ಪ್ರೇರೇಪಿಸುವ ಯಾವುದೇ ಭೌತಿಕ ಸ್ವಿಚ್ ಅಲ್ಲಿರುವುದಿಲ್ಲ. ಆ ಪ್ರಾಣಿಯು ತನ್ನ ನೈಸರ್ಗಿಕ ಪ್ರವೃತ್ತಿ ಅಥವಾ ತನ್ನ ಮೆದುಳು ಮತ್ತು ದೇಹದಲ್ಲಿ ಸ್ರವಿಸುವ 'ರಾಸಾಯನಿಕಗಳ' ಮೂಲಕ ಚಾಲಿತವಾಗಿರುತ್ತದೆ. ಆ ಪರಿಧಿಯೊಳಗೆ ಅದು ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತದೆ. ಅಂದರೆ ಅದು ಸೀಮಿತ ರೂಪದ 'ಸ್ವತಂತ್ರ ಇಚ್ಛೆ'ಯನ್ನು ಹೊಂದಿದೆ.
ಈಗ ನಾವು ಮನುಷ್ಯರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನಮ್ಮಲ್ಲಿ ಅನೇಕರು ಪ್ರವೃತ್ತಿಗಳಿಂದಲೇ ಚಾಲಿತರಾಗಿದ್ದರೂ ಸಹ, ಈ ಪ್ರವೃತ್ತಿಗಳನ್ನು ಮೆಟ್ಟಿನಿಂತು ತಮ್ಮ ಸ್ವಂತ ಇಚ್ಛೆಯಂತೆ ವರ್ತಿಸಬಲ್ಲರು. ನಮಗೆ ಹಸಿವಾದಾಗ ನಾವು ನಾಯಿಯಂತೆ ಆಹಾರದ ಮೇಲೆ ಮುಗಿಬೀಳುವುದಿಲ್ಲ, ಬದಲಿಗೆ ನಮ್ಮ ಮುಂದೆ ಇರುವ ಆಹಾರವನ್ನು ತಿನ್ನುವುದು ಸರಿಯೇ ಎಂದು ಯೋಚಿಸುತ್ತೇವೆ.
ನಮ್ಮ ನಿರ್ಧಾರವನ್ನು ಹಲವು ವಿಷಯಗಳು ನಿಯಂತ್ರಿಸುತ್ತವೆ – ಆ ಆಹಾರ ನಮ್ಮದೇ?, ಅದನ್ನು ತಿನ್ನಲು ಇದು ಸರಿಯಾದ ಸಮಯವೇ?, ಆ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ?, ಮುಂತಾದವು.
ನಾವು ಆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾದರೂ, ನಮ್ಮ ಕ್ರಿಯೆಗಳು ಸಂಪೂರ್ಣವಾಗಿ ಅನಿಯಂತ್ರಿತವಾಗಿರುವುದಿಲ್ಲ. ಅವುಗಳನ್ನು ನಮ್ಮ ನೈತಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯದ ಕಾಳಜಿ ಇತ್ಯಾದಿಗಳು ನಿಯಂತ್ರಿಸುತ್ತವೆ.
ಆದ್ದರಿಂದ, ನಮ್ಮಲ್ಲಿ ಸ್ವತಂತ್ರ ಇಚ್ಛೆ ಇದ್ದರೂ, ಸ್ವನಿಯಂತ್ರಣವೂ ಇದೆ. ಈ ಸ್ವನಿಯಂತ್ರಣವೂ ಸ್ವತಂತ್ರ ಇಚ್ಛೆಯದ್ದೇ ಇನ್ನೊಂದು ರೂಪ. ಆದು ಒಂದು ನಿರ್ಜೀವ ವಸ್ತುವನ್ನು ಆಳುವ ಭೌತಿಕ ಅಡೆತಡೆಗಳನ್ನು, ಅಥವಾ ಕೆಳಮಟ್ಟದ ಜೀವಿಯನ್ನು ನಿರ್ದೇಶಿಸುವ ಪ್ರವೃತ್ತಿಯ ಒತ್ತಡಗಳನ್ನು ಮೀರಿನಿಲ್ಲಬಲ್ಲದು.
ಇನ್ನೂ ಮುಂದೆ ಹೋಗೋಣ. ಒಬ್ಬ ಸನ್ಯಾಸಿಯನ್ನು ನೋಡಿ. ಅವರು ಆಧ್ಯಾತ್ಮಿಕ ಜ್ಞಾನೋದಯದ ತಮ್ಮ ಅಂತಿಮ ಗುರಿಯನ್ನು ತಲುಪಲು, ತಮ್ಮ ಎಲ್ಲಾ ಮೂಲಭೂತ ಪ್ರವೃತ್ತಿಗಳ ವಿರುದ್ಧ ಹೋರಾಡುತ್ತಾರೆ, ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ತಮ್ಮ ಆಯ್ದ ಮಾರ್ಗದಮೇಲೆ ಧೃಡತೆಯಿಂದ ಸಾಗುತ್ತಾರೆ. ಅವರೂ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಿದ್ದಾರೆ, ಅಲ್ಲವೇ?
ಆದರೆ ಅವರು ಯಾವುದೋ ಒಂದು ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಮೇಲಿನ ನಂಬಿಕೆ ಮತ್ತು ಅದನ್ನು ಪಡೆಯಬೇಕೆಂಬ ತಮ್ಮ ಹಂಬಲಕ್ಕೆ ಕಟ್ಟುಬಿದ್ದಿರುತ್ತಾರೆ. ಆದ್ದರಿಂದ, ಅವರ ನಿರ್ಧಾರಗಳು ಸಂಪೂರ್ಣವಾಗಿ ಸ್ವತಂತ್ರವಾಗಿರುವುದಿಲ್ಲ. ಅದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ.
ತಮ್ಮ ಧರ್ಮವನ್ನು ಪ್ರಚಾರ ಮಾಡುವ ಏಕೈಕ ಗುರಿಯಿಂದ ಎಲ್ಲಾ ಐಹಿಕ ಸುಖಗಳನ್ನು ತ್ಯಜಿಸುವ ಅನೇಕ ಧರ್ಮಪ್ರಚಾರಕರ ಬಗ್ಗೆ ನೀವು ಕೇಳಿರಬಹುದು. ಅವರು ಸ್ವದೇಶವನ್ನು ಬಿಟ್ಟು, ಅಪರಿಚಿತ ದೇಶವೊಂದರಲ್ಲಿ ಸಂನ್ಯಾಸಿಯ ಜೀವನವನ್ನು ನಡೆಸಲು ಆರಿಸಿಕೊಳ್ಳುತ್ತಾರೆ ಮತ್ತು ತಮ್ಮ ಹಾದಿಯಲ್ಲಿ ಶ್ರಮಿಸುತ್ತಾರೆ.
ಆದರೆ ಕೆಲವು ಭಾರಿ, ಜನರ ಬಡತನ ಮತ್ತು ಸಂಕಟಗಳನ್ನು ಕಂಡು ಅವರ ಮನಸ್ಸು ಕರಗುತ್ತದೆ, ಅವರು ತಮ್ಮ ಪ್ರಾಥಮಿಕ ಗುರಿಯನ್ನು ಮರೆತು ಯಾವುದೇ ಧಾರ್ಮಿಕ ಅಜೆಂಡಾ ಇಲ್ಲದೆ ಅವರ ಸೇವೆಮಾಡಲು ಪ್ರಾರಂಭಿಸುತ್ತಾರೆ. ತಮ್ಮನ್ನು ಹಿಡಿದಿಟ್ಟಿರುವ ಎಲ್ಲಾ ಕಾರಣಗಳನ್ನು ಜಯಿಸಿ ಅವರು ಒಂದು ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
ಆದರೂ, ಆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದ್ದು ಅವರಲ್ಲಿನ ಸಹಾನುಭೂತಿಯೇ ಅಲ್ಲವೇ?.
ಭಾರತದಲ್ಲಿ 'ನಿಷ್ಕಾಮ ಯೋಗಿ'ಗಳ ಪರಂಪರೆಯಿದೆ. ಅವರಿಗೆ ಯಾವುದೇ ಸ್ವಾರ್ಥವಾಗಲೀ ಧಾರ್ಮಿಕ ಅಜೆಂಡಾ ಆಗಲೀ ಇರುವುದಿಲ್ಲ. ಅವರು ಸಹಾನುಭೂತಿಯಿಂದಲೂ ಪ್ರೇರಿತರಾಗಿರುವುದಿಲ್ಲ. ಅವರು ಕೇವಲ ತಮ್ಮ ಕರ್ತವ್ಯ ಎಂಬ ಒಂದೇ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಈ ಆಳವಾದ ಕರ್ತವ್ಯ ಪ್ರಜ್ಞೆಯೇ ಅವರು ಆರಿಸಿಕೊಂಡ ಹಾದಿಗೆ ಕಾರಣವಾಗುತ್ತದೆ.
ಹೀಗೆ, ಈ ಎಲ್ಲಾ ಉದಾಹರಣೆಗಳಲ್ಲಿಯೂ, ಮೇಲ್ನೋಟಕ್ಕೆ ಕಾಣುವ ಸ್ವತಂತ್ರ ಆಯ್ಕೆಯ ಹಿಂದೆ ಯಾವಾಗಲೂ ಒಂದು ಕಾರಣವಿರುತ್ತದೆ. ಯಾವುದೇ ಕಾರಣವಿಲ್ಲದೆ ಯಾರಾದರೂ ಏನನ್ನಾದರೂ ಮಾಡುವುದನ್ನು ನೀವು ಊಹಿಸಬಲ್ಲಿರಾ? ಬಹುಶಃ ಅದು ಸಾಧ್ಯವಿಲ್ಲ.
ಆದರೆ ನೀವು ಪ್ರಾಯಶಃ ಗಮನಿಸಿರದ ಒಂದು ಸೂಕ್ಷ್ಮ ವಿಷಯ ಇಲ್ಲಿದೆ.
ಫ್ಯಾನಿನಂತಹ ನಿರ್ಜೀವ ವಸ್ತುವಿನ ವಿಷಯದಲ್ಲಿ ಕಾರಣವು ಭೌತಿಕವಾಗಿತ್ತು. ಪ್ರಾಣಿಗಳ ವಿಷಯದಲ್ಲಿ ಅದು ರಾಸಾಯನಿಕವಾಗಿತ್ತು. ಸಾಮಾನ್ಯ ಮನುಷ್ಯರಲ್ಲಿ ಅದು ಸಾಮಾಜಿಕ ನಿಯಮಗಳು ಮತ್ತು ಒಪ್ಪಿತ ಮೌಲ್ಯಗಳಾಗಿವೆ. ಆಧ್ಯಾತ್ಮ ಮಾರ್ಗದಲ್ಲಿ ಹೋಗುವವರಿಗೆ ಅವರ ಧೃಡವಾದ ನಂಬುಗೆ; ಸಮಾಜ ಸೇವಕರಲ್ಲಿ ಅದು ಸಹಾನುಭೂತಿ; ಮತ್ತು ಕರ್ಮಯೋಗಿಗಳಲ್ಲಿ ಅದು ಬಲವಾದ ಕರ್ತವ್ಯ ಪ್ರಜ್ಞೆ.
ಪ್ರತಿಯೊಬ್ಬರೂ ಯಾವುದಾದರೂ ಒಂದು ಕಾರಣದಿಂದಲೇ ಚಾಲಿತರಾಗಿದ್ದರು. ಆದರೆ ಈ ಕಾರಣವು ಕ್ರಮೇಣ, ಸ್ಥೂಲದಿಂದ ಸೂಕ್ಷ್ಮದೆಡೆಗೆ ಚಲಿಸುವುದನ್ನು ಕಾಣಬಹುದು.
ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇವರಲ್ಲಿ ಪ್ರತಿಯೊಬ್ಬರೂ ಪ್ರದರ್ಶಿಸಿದ ಸ್ವತಂತ್ರ ಇಚ್ಛೆ ಒಂದೇ ರೀತಿಯದಾಗಿರಲಿಲ್ಲ. ಆ ಇಚ್ಛೆಯ ಹಿಂದಿರುವ ಕಾರಣ ಬೇರೆಬೇರೆ ಸ್ತರದಲ್ಲಿತ್ತು. ಅವರು ಕ್ರಮೇಣ, ಸಂಪೂರ್ಣ ಸ್ವತಂತ್ರ ಇಚ್ಛೆಯ ಮಿತಿಯ ಹತ್ತಿರಕ್ಕೆ ಸರಿಯುತ್ತಿದ್ದಂತೆ ಕಾಣುತ್ತದೆ. ಯಾರೂ ಆ ಮಿತಿಯನ್ನು ತಲುಪದಿದ್ದರೂ ಸಹ.
ಆದ್ದರಿಂದ, ಸ್ವತಂತ್ರ ಇಚ್ಛೆ ಎಂಬುದು 'ಇದೆ ಅಥವಾ ಇಲ್ಲ' ಎಂಬ ಬೈನರಿ ಅಲ್ಲ. ಅದೊಂದು "ಸ್ವಾತಂತ್ರ್ಯದ" ವಿಶಾಲ ಶ್ರೇಣಿ. ಈ ಶ್ರೇಣಿಯ ಕೆಳಮಟ್ಟದಲ್ಲಿ ಇರುವವರ ಸ್ವತಂತ್ರ ಇಚ್ಛೆಯು, ಮೇಲ್ಮಟ್ಟದಲ್ಲಿ ಇರುವವರಿಗಿಂತ ಹೆಚ್ಚು ಸೀಮಿತವಾಗಿರುತ್ತದೆ. ಆದರೂ ಅವರೆಲ್ಲರೂ ವಿವಿಧ ಹಂತಗಳಲ್ಲಿ ಸ್ವತಂತ್ರ ಇಚ್ಛೆಯನ್ನು ಪ್ರದರ್ಶಿಸುತ್ತಾರೆ.
ಹೌದು, ಆ ರೀತಿಯಲ್ಲಿ ನೋಡಿದರೆ, ನಮ್ಮಲ್ಲಿ ಯಾರಿಗೂ ಸಂಪೂರ್ಣ 'ಸ್ವತಂತ್ರ ಇಚ್ಛೆ' ಎಂಬುದು ಇಲ್ಲ. ಏಕೆಂದರೆ ನಾವೆಲ್ಲರೂ ಕಾರ್ಯಕಾರಣ ಸಂಬಂಧದ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸುತ್ತೇವೆ. ಆ ಚೌಕಟ್ಟಿನೊಳಗೆ ನಮಗೆಲ್ಲರಿಗೂ ಸೀಮಿತ ಪರಿಧಿಯಲ್ಲಿ ಸ್ವತಂತ್ರ ಇಚ್ಛೆ ಎಂಬುದು ಖಂಡಿತವಾಗಿಯೂ ಇದೆ. ಅದರ ಸ್ತರ ಭಿನ್ನವಾಗಿರಬಹುದು.
ಒಂದು ವೇಳೆ ಈ 'ಸ್ವತಂತ್ರ ಇಚ್ಛೆ'ಯ ಶ್ರೇಣಿಗೆ ಒಂದು ಅಂತಿಮ ಮಿತಿ ಇದ್ದರೆ, ಅದು ಹೇಗಿರಬಹುದು? ಆ ಮಿತಿಯಲ್ಲಿ ಇರುವವರು ಕಾರ್ಯಕಾರಣ ಸಂಬಂಧದಿಂದ ಮುಕ್ತರಾಗಿರಬೇಕು. ಅವರು ಯಾವುದೇ ಕಾರಣವಿಲ್ಲದೆ ಕಾರ್ಯನಿರ್ವಹಿಸುತ್ತಾರೆ. ಅವರು ಅನಿಯಂತ್ರಿತ 'ಸ್ವತಂತ್ರ ಇಚ್ಛೆ'ಯನ್ನು ಪ್ರದರ್ಶಿಸುತ್ತಾರೆ.
ಭಾರತೀಯ ತತ್ವಶಾಸ್ತ್ರವು ಅಂತಹ ಒಂದು ಸಾಧ್ಯತೆಯನ್ನು ಕಲ್ಪಿಸುತ್ತದೆ. ಉಪನಿಷತ್ತುಗಳು ಇದನ್ನು 'ಆತ್ಮ' ಎಂದು ಕರೆಯುತ್ತವೆ — ಇದು ಕಾರ್ಯಕಾರಣದ ಪಾಶದಿಂದ ಮುಕ್ತವಾದದ್ದು. ಅಂತಹುದಕ್ಕೆ ಮಾತ್ರ ಸಂಪೂರ್ಣ 'ಸ್ವತಂತ್ರ ಇಚ್ಛೆ' ಇರುತ್ತದೆ.
ಸಾಮಾನ್ಯರ ಭಾಷೆಯಲ್ಲಿ, ಧಾರ್ಮಿಕ ಜನರು ಇದನ್ನು 'ದೇವರು' ಎಂದು ಕರೆಯುತ್ತಾರೆ. ಬೈಬಲಿನಲ್ಲಿ ದೇವರು ಯಾವ ಕಾರಣವೂ ಇಲ್ಲದೇ 'ಬೆಳಕಾಗಲಿ' ಎನ್ನುತ್ತಾನೆ ಮತ್ತು ಬೆಳಕಾಗುತ್ತದೆ. ಅದೇ ದೇವರು ಉಪನಿಷತ್ತಿನಲ್ಲಿ "ನಾನು ಅನೇಕವಾಗಲಿ" ಎನ್ನುತ್ತದೆ, ಮತ್ತು ಅದು ಜಗತ್ತು, ಜೀವಿಗಳು ಇತ್ಯಾದಿ, ಅನೇಕವಾಗುತ್ತದೆ.
ಅಂಥವನೊಬ್ಬನಿದ್ದರೆ ಮಾತ್ರ ಅವನು ಸಂಪೂರ್ಣ ಸ್ವತಂತ್ರ ಇಚ್ಛೆಯಿಂದ ತುಂಬಿರಬಲ್ಲನು. ಉಳಿದವರೆಲ್ಲರ ಸ್ವತಂತ್ರ ಇಚ್ಛೆಯೆಂಬುದು ಸೀಮಿತ. ನಾವು ವಿಕಾಸಹೊಂದಿದಂತೆ ಈ ಸ್ವಾತಂತ್ರ್ಯದ ಸೀಮೆ ವಿಸ್ತರಿಸುತ್ತಾ ಹೋಗುತ್ತದೆ ಅಷ್ಟೇ.
ಆ ಸ್ವತಂತ್ರ ಇಚ್ಛೆಯನ್ನು ಕೆಲವು ಸರಳ ಪ್ರೋಬ್ ಗಳ ಮೂಲಕ ಸಿದ್ಧಪಡಿಸಲಾಗುವುದಿಲ್ಲ. ಅದು ಅಂತರ್ ದೃಷ್ಠಿಯಿಂದಷ್ಟೇ ಕಂಡುಕೊಳ್ಳಬಲ್ಲುದಾಗಿದೆ.
--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್ಗಳಿಲ್ಲ, ಕ್ಲಿಕ್ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.
© Dr. King, Swami Satyapriya 2026
No comments:
Post a Comment