ಕಳೆದ ಕೆಲವು ಸಂಚಿಕೆಗಳಲ್ಲಿ, ನಾವು ಪ್ರಜ್ಞೆಯ ಬಗ್ಗೆ ಚರ್ಚಿಸಿದ್ದೆವು. ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ, ಸುಷುಪ್ತಿ ಸ್ಥಿತಿ ಹಾಗೂ ವರ್ಣಿಸಲಾಗದ ತುರೀಯ ಸ್ಥಿತಿ ಎಂಬ ಪ್ರಜ್ಞೆಯ ಈ ನಾಲ್ಕು ಸ್ಥಿತಿಗಳ ಕುರಿತು ನಾವು ಮಾತನಾಡಿದ್ದೆವು. ಎಲ್ಲಾ ಜೀವಿಗಳು ಬೇರೆ ಬೇರೆ ಸಮಯಗಳಲ್ಲಿ ಈ ನಾಲ್ಕು ಪ್ರಜ್ಞೆಯ ಸ್ಥಿತಿಗಳಲ್ಲಿ ಒಂದನ್ನು ಅನುಭವಿಸುತ್ತವೆ.
ನಮ್ಮ ಚರ್ಚೆಯು ಭಾರತದ ಪ್ರಾಚೀನ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧರಿಸಿತ್ತು.
ಹಿಂದಿನ ಸಂಚಿಕೆಯ ಕೊನೆಯಲ್ಲಿ, ಭಾರತದ ಅನೇಕ ಅದ್ವೈತ ತತ್ತ್ವಜ್ಞಾನಿಗಳು ಪ್ರಜ್ಞೆಯ ಈ ಸ್ಥಿತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನಾನು ಸುಳಿವು ನೀಡಿದ್ದೆ. ಈ ಸಂಚಿಕೆಯಲ್ಲಿ, ಗೌಡಪಾದರು ತಮ್ಮ ಪ್ರಸಿದ್ಧ ಮಾಂಡೂಕ್ಯ ಕಾರಿಕೆಯಲ್ಲಿ - ಅಂದರೆ ಮಾಂಡೂಕ್ಯ ಉಪನಿಷತ್ತಿನ ವಿವರಣೆಯಲ್ಲಿ - ಸೂಚಿಸಿದ ಪರ್ಯಾಯ ದೃಷ್ಟಿಕೋನವನ್ನು ನಾನು ಸಂಕ್ಷಿಪ್ತವಾಗಿ ಚರ್ಚಿಸಲಿದ್ದೇನೆ.
ಯಾರು ಈ ಗೌಡಪಾದರು ?
ಗೌಡಪಾದರು ಅದ್ವೈತ ಸಿದ್ಧಾಂತದ ಮೂಲ ತತ್ತ್ವಜ್ಞಾನಿ. ಅವರು ಕ್ರಿ.ಶ. ೬ ನೇ ಶತಮಾನಕ್ಕೆ ಸೇರಿದವರು. ಅವರು ಪ್ರಸಿದ್ಧ ಅದ್ವೈತ ತತ್ತ್ವಜ್ಞಾನಿ ಶಂಕರರ ಪರಮಗುರುಗಳಾಗಿದ್ದರು.
ಗೌಡಪಾದರು ಏನು ಹೇಳಿದರು?
ನಮ್ಮ ಚರ್ಚೆಯು ಭಾರತದ ಪ್ರಾಚೀನ ಉಪನಿಷತ್ತುಗಳಲ್ಲಿ ಒಂದಾದ ಮಾಂಡೂಕ್ಯ ಉಪನಿಷತ್ತನ್ನು ಆಧರಿಸಿತ್ತು.
ಹಿಂದಿನ ಸಂಚಿಕೆಯ ಕೊನೆಯಲ್ಲಿ, ಭಾರತದ ಅನೇಕ ಅದ್ವೈತ ತತ್ತ್ವಜ್ಞಾನಿಗಳು ಪ್ರಜ್ಞೆಯ ಈ ಸ್ಥಿತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ನಾನು ಸುಳಿವು ನೀಡಿದ್ದೆ. ಈ ಸಂಚಿಕೆಯಲ್ಲಿ, ಗೌಡಪಾದರು ತಮ್ಮ ಪ್ರಸಿದ್ಧ ಮಾಂಡೂಕ್ಯ ಕಾರಿಕೆಯಲ್ಲಿ - ಅಂದರೆ ಮಾಂಡೂಕ್ಯ ಉಪನಿಷತ್ತಿನ ವಿವರಣೆಯಲ್ಲಿ - ಸೂಚಿಸಿದ ಪರ್ಯಾಯ ದೃಷ್ಟಿಕೋನವನ್ನು ನಾನು ಸಂಕ್ಷಿಪ್ತವಾಗಿ ಚರ್ಚಿಸಲಿದ್ದೇನೆ.
ಯಾರು ಈ ಗೌಡಪಾದರು ?
ಗೌಡಪಾದರು ಅದ್ವೈತ ಸಿದ್ಧಾಂತದ ಮೂಲ ತತ್ತ್ವಜ್ಞಾನಿ. ಅವರು ಕ್ರಿ.ಶ. ೬ ನೇ ಶತಮಾನಕ್ಕೆ ಸೇರಿದವರು. ಅವರು ಪ್ರಸಿದ್ಧ ಅದ್ವೈತ ತತ್ತ್ವಜ್ಞಾನಿ ಶಂಕರರ ಪರಮಗುರುಗಳಾಗಿದ್ದರು.
ಗೌಡಪಾದರು ಏನು ಹೇಳಿದರು?
ಗೌಡಪಾದರ ಪ್ರಕಾರ, ಮಾಂಡೂಕ್ಯ ಉಪನಿಷತ್ತಿನಲ್ಲಿ ವಿವರಿಸಲಾದ ಪ್ರಜ್ಞೆಯ ಮೊದಲ ಮೂರು ಸ್ಥಿತಿಗಳು ಕೇವಲ ತೋರಿಕೆಗಳಷ್ಟೇ ಹೊರತು ನಿಜವಲ್ಲ. ಏಕೈಕ ಸತ್ಯವಾದ ಸ್ಥಿತಿಯೆಂದರೆ ತುರೀಯ, ಅದುವೇ ಇತರ ಮೂರು ಸ್ಥಿತಿಗಳೆಂಬಂತೆ 'ತೋರುತ್ತದೆ'.
ಒಂದೇ ಪ್ರಜ್ಞೆಯ ಸ್ಥಿತಿಯು ಇತರ ಮೂರು ಸ್ಥಿತಿಗಳಾಗಿ ಹೇಗೆ ತೋರಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ವಿವಿಧ ಉಪಮೆಗಳನ್ನು ನೀಡುತ್ತಾರೆ.
ಕನಸಿನ ಉಪಮೆ:
ಒಬ್ಬ ವ್ಯಕ್ತಿ ಕನಸು ಕಾಣುವಾಗ, ಅವನು ಅನೇಕ ಜನರನ್ನು, ಅನೇಕ ಸ್ಥಳಗಳನ್ನು ಮತ್ತು ಅನೇಕ ಘಟನೆಗಳನ್ನು ಕಾಣುತ್ತಾನೆ. ಆದರೆ, ವಾಸ್ತವದಲ್ಲಿ, ಇವೆಲ್ಲವೂ ಒಂದೇ ಮನಸ್ಸಿನ ಸೃಷ್ಟಿ - ಅಂದರೆ ಕನಸು ಕಾಣುವವನ ಮನಸ್ಸಿನ ಸೃಷ್ಟಿ. ಅಂತೆಯೇ, ಏಕೈಕ ವಿಶ್ವ ಪ್ರಜ್ಞೆಯು ಪ್ರತಿಯೊಬ್ಬ ಜೀವಿಯೂ ಒಂದು ನಿರ್ದಿಷ್ಟ ಪ್ರಜ್ಞೆಯ ಸ್ಥಿತಿಯಲ್ಲಿದ್ದಂತೆ ಕಾಣುವ ಅನೇಕ ಜೀವಿಗಳ ಅಸ್ತಿತ್ವದ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಗೌಡಪಾದರು ಹೇಳುತ್ತಾರೆ.
ಈ ಜೀವಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕನಸಿನ ಸಮಯದಲ್ಲಿ ಕಾಣುವ ತೋರಿಕೆಗಳಿದ್ದಂತೆ. ಕನಸಿನ ಹೊರಗೆ, ಎಲ್ಲಾ ಕನಸಿನ ವಸ್ತುಗಳೂ ಇಲ್ಲವಾಗುತ್ತವೆ, ಏಕೆಂದರೆ ಅವು ಎಂದಿಗೂ ನಿಜವಾಗಿ ಅಸ್ತಿತ್ವದಲ್ಲಿರಲಿಲ್ಲ. ಅವು ಕೇವಲ ಇದ್ದಂತೆ ತೋರುತ್ತಿದ್ದವು ಅಷ್ಟೇ. ಹಾಗೆಯೇ ವಾಸ್ತವದಲ್ಲಿ ಇದ್ದಂತೆ ಕಾಣುವ ವೈವಿದ್ಯವೂ ಕೂಡಾ.
ಒಂದೇ ಒಂದು ಪ್ರಜ್ಞೆ ಮಾತ್ರ ಇದ್ದರೂ ಕೂಡಾ, ಈ ಬಹುತ್ವವು ಹೇಗೆ ಗೋಚರವಾಗುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ಮತ್ತೊಂದು ಉಪಮೆಯನ್ನು ನೀಡುತ್ತಾರೆ.
ಮಡಕೆಗಳ ಉಪಮೆ:
ನಿಮ್ಮ ಬಳಿ ಹಲವಾರು ಮಡಕೆಗಳಿವೆ ಎಂದುಕೊಳ್ಳಿ. ಪ್ರತಿಯೊಂದು ಮಡಕೆಯ ಒಳಗೂ ಒಂದಷ್ಟು ಆಕಾಶ (ಖಾಲಿ ಜಾಗ) ಇರುತ್ತದೆ. ಈ ಆಕಾಶಕ್ಕೆ ನಿರ್ದಿಷ್ಟ ಆಕಾರ ಮತ್ತು ಗುಣಲಕ್ಷಣಗಳಿರುತ್ತವೆ. ಈ ಮಡಕೆಗಳ ಹೊರಗೂ ಆಕಾಶವಿದೆ. ಹಾಗೆಂದ ಮಾತ್ರಕ್ಕೆ ಮಡಕೆಯ ಒಳಗಿನ ಆಕಾಶ ಮತ್ತು ಮಡಕೆಯ ಹೊರಗಿನ ಆಕಾಶ ಎಂದು ಅನೇಕ ಆಕಾಶಗಳಿವೆಯೇ?
ಇಲ್ಲ, ವಾಸ್ತವದಲ್ಲಿ ಇರುವುದು ಒಂದೇ ಆಕಾಶ. ಈ ಬಹುತ್ವವನ್ನು ತಂದಿರುವುದು ಮಡಕೆ. ಮಡಕೆಯು ಒಂದೇ ಆಕಾಶವನ್ನು ವಿಭಿನ್ನ ಆಕಾಶಗಳೆಂದು ತೋರುವಂತೆ ಮಾಡುತ್ತದೆ. ಏಕೀಕೃತವಾದ ಒಂದೇ ಆಕಾಶವನ್ನು ಹಲವು ಭಾಗಗಳಾಗಿ ವಿಂಗಡಿಸುವ ಭ್ರಮೆಯನ್ನು ಸೃಷ್ಟಿಸುವುದೇ ಮಡಕೆ. ಅದೇ ರೀತಿ, ವಿಭಿನ್ನ ಭೌತಿಕ ರೂಪಗಳು ವಿಭಿನ್ನ ಪ್ರಜ್ಞೆಗಳಿವೆಯೆಂಬ ಭ್ರಮೆಯನ್ನು ನೀಡುತ್ತವೆ. ಆದರೆ ಇರುವುದು ಒಂದೇ ವಿಶ್ವಪ್ರಜ್ಞೆ.
ಗೌಡಪಾದರು ಮುಂದುವರಿದು ಮೂರನೇ ಉಪಮೆಯನ್ನು ನೀಡುತ್ತಾರೆ.
ಉರಿಯುವ ದೀವಟಿಗೆಯ ಉಪಮೆ:
ಗಾಳಿಯಾಡದ ಸ್ಥಳದಲ್ಲಿ ನೀವು ಉರಿಯುವ ದೀವಟಿಗೆಯನ್ನು ಹಿಡಿದಾಗ, ಅದರ ಜ್ವಾಲೆಯು ತನ್ನಷ್ಟಕ್ಕೆ ತಾನೇ ನಿಶ್ಚಲವಾಗಿ ಉರಿಯುತ್ತದೆ. ಆದರೆ ಗಾಳಿ ಬೀಸಿದಾಗ, ಜ್ವಾಲೆಯು ಕದಲುತ್ತದೆ. ಮತ್ತು ಈ ಚಲನೆಯು ಜ್ವಾಲೆಯು ವಿಭಿನ್ನ ಆಕಾರಗಳನ್ನು ಪಡೆಯುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಜ್ವಾಲೆಯೇ ಅನೇಕ ರೂಪಗಳನ್ನು ಹೊಂದಿರುವಂತೆ ಭಾಸವಾಗುತ್ತದೆ. ದೀವಟಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸಿದರಂತೂ ಅದು ಬೆಂಕಿಯ ಚಕ್ರದಂತೆ ಕಾಣುತ್ತದೆ.
ಈ ಯಾವ ಆಕಾರಗಳೂ ಜ್ವಾಲೆಯಲ್ಲಿ ಇರಲಿಲ್ಲ. ಅಥವಾ ಅವು ಎಂದಿಗೂ ಇರುವುದಿಲ್ಲ. ಗಾಳಿಯ ಪ್ರವಾಹ ಅಥವಾ ಚಲನೆ ಉಂಟಾದಾಗ ಈ ಆಕಾರಗಳು ಇದ್ದಂತೆ ತೋರುತ್ತವೆ. ಈ ಚಲನೆಗಳು ನಿಂತ ತಕ್ಷಣ, ಈ ಆಕಾರಗಳ ತೋರಿಕೆಯೂ ನಿಂತುಹೋಗುತ್ತದೆ.
ಹಾಗೆಯೇ, ಏಕೈಕ ಪ್ರಜ್ಞೆಯಲ್ಲಿ ಉಂಟಾಗುವ ಕಂಪನಗಳಿಂದಾಗಿ ಜಗತ್ತಿನಲ್ಲಿ ಅನೇಕ ವಸ್ತುಗಳು ಇದ್ದಂತೆ 'ತೋರುತ್ತವೆ' ಎಂದು ಗೌಡಪಾದರು ಹೇಳುತ್ತಾರೆ. ಅವು ಪ್ರಜ್ಞೆಯಿಂದ ಸೃಷ್ಟಿಸಲ್ಪಟ್ಟವುಗಳಲ್ಲ. ಆದರೆ ವಿಶ್ವ ಪ್ರಜ್ಞೆಯಲ್ಲಿನ ಕಂಪನಗಳಿಂದಾಗಿ ಅವು ಕೇವಲ ಇದ್ದಂತೆ ತೋರುತ್ತವೆ.
ಮತ್ತು ಆ ವಿಶ್ವ ಪ್ರಜ್ಞೆಯನ್ನೇ ಉಪನಿಷತ್ತು ತುರೀಯ ಎಂದು ಕರೆಯುತ್ತದೆ. ಇನ್ನುಳಿದ ಮೂರು, ಅಂದರೆ ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿಗಳು ಕೇವಲ ಆ ಪ್ರಜ್ಞೆಯ ತೋರಿಕೆಗಳಷ್ಟೇ.
ಪ್ರತಿಯೊಂದು ಉಪಮೆಯೂ ಅತ್ಯಂತ ಗಹನವಾಗಿದೆ. ಗೌಡಪಾದರು ಈ ಪ್ರತಿಯೊಂದು ಪರಿಕಲ್ಪನೆಯ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಇಷ್ಟೊಂದು ಸುಸಮ್ಮತವಾಗಿದ್ದರೂ, ಈ ಉಪಮೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅವು ಹಲವು ವಿರೋಧಾಭಾಸಗಳಿಗೆ ಜನ್ಮ ನೀಡುತ್ತವೆ. ನಾನು ನನ್ನ "Unraveling the Hidden Mysteries of The Vedas Part 2: Amazing Upanishads" ಪುಸ್ತಕದಲ್ಲಿ ಇವುಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ ನೀವು ಹೆಚ್ಚಿನ ವಿವರಗಳನ್ನು, ಮತ್ತು ಈ ವಿರೋಧಾಭಾಸಗಳಿಗೆ ನನ್ನದೇ ಆದ ಪರಿಹಾರ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಣಬಹುದು.
ಈಗ, ಗೌಡಪಾದರ ಏಕೀಕೃತ ಪ್ರಜ್ಞೆಯ ಸಿದ್ಧಾಂತಕ್ಕೆ ಹಿಂತಿರುಗುವುದಾದರೆ, ಗೌಡಪಾದರ ವಿವರಣೆಯಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ:
ಈ ವಿಶ್ವ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌಡಪಾದರು ಧ್ಯಾನ ಮಾರ್ಗವನ್ನು ಸೂಚಿಸುತ್ತಾರೆ.
ಕೊನೆಯಲ್ಲಿ ಗೌಡಪಾದರ ಈ ಮಾತುಗಳೊಂದಿಗೆ ನಾನು ಈ ಚರ್ಚೆಯನ್ನು ಮುಕ್ತಾಯಗೊಳಿಸುತ್ತೇನೆ –
ಅವರು ಹೇಳುವುದೇನೆಂದರೆ, ಪ್ರತ್ಯೇಕ ವ್ಯಕ್ತಿಯ ಮನಸ್ಸು –
ಅಂತಹ ವ್ಯಕ್ತಿಯ ಮನಸ್ಸು ತನ್ನನ್ನು ಆ ವಿಶ್ವ ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುತ್ತದೆ.
ಮತ್ತೊಂದು ಕುತೂಹಲಕಾರಿ ವಿಷಯದೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ನನ್ನೊಂದಿಗೆ ಜೋಡಿಸಿಕೊಳ್ಳಿ.
ಪ್ರಜ್ಞೆಯ ಕುರಿತಾದ ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಈ ಗಹನವಾದ ಆಲೋಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನನಗೆ ತಿಳಿಸಿ.
ಒಂದೇ ಪ್ರಜ್ಞೆಯ ಸ್ಥಿತಿಯು ಇತರ ಮೂರು ಸ್ಥಿತಿಗಳಾಗಿ ಹೇಗೆ ತೋರಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ವಿವಿಧ ಉಪಮೆಗಳನ್ನು ನೀಡುತ್ತಾರೆ.
ಕನಸಿನ ಉಪಮೆ:
ಒಬ್ಬ ವ್ಯಕ್ತಿ ಕನಸು ಕಾಣುವಾಗ, ಅವನು ಅನೇಕ ಜನರನ್ನು, ಅನೇಕ ಸ್ಥಳಗಳನ್ನು ಮತ್ತು ಅನೇಕ ಘಟನೆಗಳನ್ನು ಕಾಣುತ್ತಾನೆ. ಆದರೆ, ವಾಸ್ತವದಲ್ಲಿ, ಇವೆಲ್ಲವೂ ಒಂದೇ ಮನಸ್ಸಿನ ಸೃಷ್ಟಿ - ಅಂದರೆ ಕನಸು ಕಾಣುವವನ ಮನಸ್ಸಿನ ಸೃಷ್ಟಿ. ಅಂತೆಯೇ, ಏಕೈಕ ವಿಶ್ವ ಪ್ರಜ್ಞೆಯು ಪ್ರತಿಯೊಬ್ಬ ಜೀವಿಯೂ ಒಂದು ನಿರ್ದಿಷ್ಟ ಪ್ರಜ್ಞೆಯ ಸ್ಥಿತಿಯಲ್ಲಿದ್ದಂತೆ ಕಾಣುವ ಅನೇಕ ಜೀವಿಗಳ ಅಸ್ತಿತ್ವದ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಗೌಡಪಾದರು ಹೇಳುತ್ತಾರೆ.
ಈ ಜೀವಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕನಸಿನ ಸಮಯದಲ್ಲಿ ಕಾಣುವ ತೋರಿಕೆಗಳಿದ್ದಂತೆ. ಕನಸಿನ ಹೊರಗೆ, ಎಲ್ಲಾ ಕನಸಿನ ವಸ್ತುಗಳೂ ಇಲ್ಲವಾಗುತ್ತವೆ, ಏಕೆಂದರೆ ಅವು ಎಂದಿಗೂ ನಿಜವಾಗಿ ಅಸ್ತಿತ್ವದಲ್ಲಿರಲಿಲ್ಲ. ಅವು ಕೇವಲ ಇದ್ದಂತೆ ತೋರುತ್ತಿದ್ದವು ಅಷ್ಟೇ. ಹಾಗೆಯೇ ವಾಸ್ತವದಲ್ಲಿ ಇದ್ದಂತೆ ಕಾಣುವ ವೈವಿದ್ಯವೂ ಕೂಡಾ.
ಒಂದೇ ಒಂದು ಪ್ರಜ್ಞೆ ಮಾತ್ರ ಇದ್ದರೂ ಕೂಡಾ, ಈ ಬಹುತ್ವವು ಹೇಗೆ ಗೋಚರವಾಗುತ್ತದೆ ಎಂಬುದನ್ನು ವಿವರಿಸಲು ಗೌಡಪಾದರು ಮತ್ತೊಂದು ಉಪಮೆಯನ್ನು ನೀಡುತ್ತಾರೆ.
ಮಡಕೆಗಳ ಉಪಮೆ:
ನಿಮ್ಮ ಬಳಿ ಹಲವಾರು ಮಡಕೆಗಳಿವೆ ಎಂದುಕೊಳ್ಳಿ. ಪ್ರತಿಯೊಂದು ಮಡಕೆಯ ಒಳಗೂ ಒಂದಷ್ಟು ಆಕಾಶ (ಖಾಲಿ ಜಾಗ) ಇರುತ್ತದೆ. ಈ ಆಕಾಶಕ್ಕೆ ನಿರ್ದಿಷ್ಟ ಆಕಾರ ಮತ್ತು ಗುಣಲಕ್ಷಣಗಳಿರುತ್ತವೆ. ಈ ಮಡಕೆಗಳ ಹೊರಗೂ ಆಕಾಶವಿದೆ. ಹಾಗೆಂದ ಮಾತ್ರಕ್ಕೆ ಮಡಕೆಯ ಒಳಗಿನ ಆಕಾಶ ಮತ್ತು ಮಡಕೆಯ ಹೊರಗಿನ ಆಕಾಶ ಎಂದು ಅನೇಕ ಆಕಾಶಗಳಿವೆಯೇ?
ಇಲ್ಲ, ವಾಸ್ತವದಲ್ಲಿ ಇರುವುದು ಒಂದೇ ಆಕಾಶ. ಈ ಬಹುತ್ವವನ್ನು ತಂದಿರುವುದು ಮಡಕೆ. ಮಡಕೆಯು ಒಂದೇ ಆಕಾಶವನ್ನು ವಿಭಿನ್ನ ಆಕಾಶಗಳೆಂದು ತೋರುವಂತೆ ಮಾಡುತ್ತದೆ. ಏಕೀಕೃತವಾದ ಒಂದೇ ಆಕಾಶವನ್ನು ಹಲವು ಭಾಗಗಳಾಗಿ ವಿಂಗಡಿಸುವ ಭ್ರಮೆಯನ್ನು ಸೃಷ್ಟಿಸುವುದೇ ಮಡಕೆ. ಅದೇ ರೀತಿ, ವಿಭಿನ್ನ ಭೌತಿಕ ರೂಪಗಳು ವಿಭಿನ್ನ ಪ್ರಜ್ಞೆಗಳಿವೆಯೆಂಬ ಭ್ರಮೆಯನ್ನು ನೀಡುತ್ತವೆ. ಆದರೆ ಇರುವುದು ಒಂದೇ ವಿಶ್ವಪ್ರಜ್ಞೆ.
ಗೌಡಪಾದರು ಮುಂದುವರಿದು ಮೂರನೇ ಉಪಮೆಯನ್ನು ನೀಡುತ್ತಾರೆ.
ಉರಿಯುವ ದೀವಟಿಗೆಯ ಉಪಮೆ:
ಗಾಳಿಯಾಡದ ಸ್ಥಳದಲ್ಲಿ ನೀವು ಉರಿಯುವ ದೀವಟಿಗೆಯನ್ನು ಹಿಡಿದಾಗ, ಅದರ ಜ್ವಾಲೆಯು ತನ್ನಷ್ಟಕ್ಕೆ ತಾನೇ ನಿಶ್ಚಲವಾಗಿ ಉರಿಯುತ್ತದೆ. ಆದರೆ ಗಾಳಿ ಬೀಸಿದಾಗ, ಜ್ವಾಲೆಯು ಕದಲುತ್ತದೆ. ಮತ್ತು ಈ ಚಲನೆಯು ಜ್ವಾಲೆಯು ವಿಭಿನ್ನ ಆಕಾರಗಳನ್ನು ಪಡೆಯುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಜ್ವಾಲೆಯೇ ಅನೇಕ ರೂಪಗಳನ್ನು ಹೊಂದಿರುವಂತೆ ಭಾಸವಾಗುತ್ತದೆ. ದೀವಟಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸಿದರಂತೂ ಅದು ಬೆಂಕಿಯ ಚಕ್ರದಂತೆ ಕಾಣುತ್ತದೆ.
ಈ ಯಾವ ಆಕಾರಗಳೂ ಜ್ವಾಲೆಯಲ್ಲಿ ಇರಲಿಲ್ಲ. ಅಥವಾ ಅವು ಎಂದಿಗೂ ಇರುವುದಿಲ್ಲ. ಗಾಳಿಯ ಪ್ರವಾಹ ಅಥವಾ ಚಲನೆ ಉಂಟಾದಾಗ ಈ ಆಕಾರಗಳು ಇದ್ದಂತೆ ತೋರುತ್ತವೆ. ಈ ಚಲನೆಗಳು ನಿಂತ ತಕ್ಷಣ, ಈ ಆಕಾರಗಳ ತೋರಿಕೆಯೂ ನಿಂತುಹೋಗುತ್ತದೆ.
ಹಾಗೆಯೇ, ಏಕೈಕ ಪ್ರಜ್ಞೆಯಲ್ಲಿ ಉಂಟಾಗುವ ಕಂಪನಗಳಿಂದಾಗಿ ಜಗತ್ತಿನಲ್ಲಿ ಅನೇಕ ವಸ್ತುಗಳು ಇದ್ದಂತೆ 'ತೋರುತ್ತವೆ' ಎಂದು ಗೌಡಪಾದರು ಹೇಳುತ್ತಾರೆ. ಅವು ಪ್ರಜ್ಞೆಯಿಂದ ಸೃಷ್ಟಿಸಲ್ಪಟ್ಟವುಗಳಲ್ಲ. ಆದರೆ ವಿಶ್ವ ಪ್ರಜ್ಞೆಯಲ್ಲಿನ ಕಂಪನಗಳಿಂದಾಗಿ ಅವು ಕೇವಲ ಇದ್ದಂತೆ ತೋರುತ್ತವೆ.
ಮತ್ತು ಆ ವಿಶ್ವ ಪ್ರಜ್ಞೆಯನ್ನೇ ಉಪನಿಷತ್ತು ತುರೀಯ ಎಂದು ಕರೆಯುತ್ತದೆ. ಇನ್ನುಳಿದ ಮೂರು, ಅಂದರೆ ಜಾಗ್ರತ ಸ್ಥಿತಿ, ಸ್ವಪ್ನ ಸ್ಥಿತಿ ಮತ್ತು ಸುಷುಪ್ತಿ ಸ್ಥಿತಿಗಳು ಕೇವಲ ಆ ಪ್ರಜ್ಞೆಯ ತೋರಿಕೆಗಳಷ್ಟೇ.
ಪ್ರತಿಯೊಂದು ಉಪಮೆಯೂ ಅತ್ಯಂತ ಗಹನವಾಗಿದೆ. ಗೌಡಪಾದರು ಈ ಪ್ರತಿಯೊಂದು ಪರಿಕಲ್ಪನೆಯ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಇಷ್ಟೊಂದು ಸುಸಮ್ಮತವಾಗಿದ್ದರೂ, ಈ ಉಪಮೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅವು ಹಲವು ವಿರೋಧಾಭಾಸಗಳಿಗೆ ಜನ್ಮ ನೀಡುತ್ತವೆ. ನಾನು ನನ್ನ "Unraveling the Hidden Mysteries of The Vedas Part 2: Amazing Upanishads" ಪುಸ್ತಕದಲ್ಲಿ ಇವುಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ ನೀವು ಹೆಚ್ಚಿನ ವಿವರಗಳನ್ನು, ಮತ್ತು ಈ ವಿರೋಧಾಭಾಸಗಳಿಗೆ ನನ್ನದೇ ಆದ ಪರಿಹಾರ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಣಬಹುದು.
ಈಗ, ಗೌಡಪಾದರ ಏಕೀಕೃತ ಪ್ರಜ್ಞೆಯ ಸಿದ್ಧಾಂತಕ್ಕೆ ಹಿಂತಿರುಗುವುದಾದರೆ, ಗೌಡಪಾದರ ವಿವರಣೆಯಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ:
- ಈ ಪ್ರಪಂಚವು ವಿಶ್ವ ಪ್ರಜ್ಞೆಯ ಕಂಪನಗಳಿಂದ ಸೃಷ್ಟಿಯಾದ ಕೇವಲ ಒಂದು ತೋರಿಕೆ.
- ಮತ್ತು ಈ ಕಂಪನಗಳು ನಿಂತಾಗ, ಈ ಪ್ರಪಂಚದ ತೋರಿಕೆಯೂ ನಿಂತುಹೋಗುತ್ತದೆ.
- ಮತ್ತು ಈ ಕಂಪನಗಳು ನಿಂತಾಗ, ಈ ಪ್ರಪಂಚದ ತೋರಿಕೆಯೂ ನಿಂತುಹೋಗುತ್ತದೆ.
ಈ ವಿಶ್ವ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌಡಪಾದರು ಧ್ಯಾನ ಮಾರ್ಗವನ್ನು ಸೂಚಿಸುತ್ತಾರೆ.
ಕೊನೆಯಲ್ಲಿ ಗೌಡಪಾದರ ಈ ಮಾತುಗಳೊಂದಿಗೆ ನಾನು ಈ ಚರ್ಚೆಯನ್ನು ಮುಕ್ತಾಯಗೊಳಿಸುತ್ತೇನೆ –
"ಯದಾ ನ ಲೀಯತೇ ಚಿತ್ತಂ, ನ ಚ ವಿಕ್ಷಿಪ್ಯತೇ ಪುನಃ,
ಅನಿಂಗನಮನಾಭಾಸಂ ನಿಷ್ಪನ್ನಂ ಬ್ರಹ್ಮ ತತ್ತದಾ."
— ಮಾಂಡೂಕ್ಯ ಕಾರಿಕಾ : ಅದ್ವೈತ ಪ್ರಕರಣ, ಶ್ಲೋಕ 46.
ಅನಿಂಗನಮನಾಭಾಸಂ ನಿಷ್ಪನ್ನಂ ಬ್ರಹ್ಮ ತತ್ತದಾ."
— ಮಾಂಡೂಕ್ಯ ಕಾರಿಕಾ : ಅದ್ವೈತ ಪ್ರಕರಣ, ಶ್ಲೋಕ 46.
ಅವರು ಹೇಳುವುದೇನೆಂದರೆ, ಪ್ರತ್ಯೇಕ ವ್ಯಕ್ತಿಯ ಮನಸ್ಸು –
- ಗಾಢ ನಿದ್ರೆಯಲ್ಲಿ ಕಳೆದುಹೋಗದಿದ್ದಾಗ ಮತ್ತು
- ಜಾಗ್ರತ ಮತ್ತು ಸ್ವಪ್ನ ಸ್ಥಿತಿಗಳಲ್ಲಿ ಚದುರಿಹೋಗದಿದ್ದಾಗ ಮತ್ತು
- ಗಾಳಿಯಿಲ್ಲದ ಪ್ರಶಾಂತ ಸ್ಥಳದಲ್ಲಿಟ್ಟ ದೀಪದ ಜ್ವಾಲೆಯಂತೆ ಸ್ಥಿರವಾಗಿದ್ದಾಗ ಮತ್ತು
- ಸುಳ್ಳು ಗುರುತುಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದಾಗ,
- ಜಾಗ್ರತ ಮತ್ತು ಸ್ವಪ್ನ ಸ್ಥಿತಿಗಳಲ್ಲಿ ಚದುರಿಹೋಗದಿದ್ದಾಗ ಮತ್ತು
- ಗಾಳಿಯಿಲ್ಲದ ಪ್ರಶಾಂತ ಸ್ಥಳದಲ್ಲಿಟ್ಟ ದೀಪದ ಜ್ವಾಲೆಯಂತೆ ಸ್ಥಿರವಾಗಿದ್ದಾಗ ಮತ್ತು
- ಸುಳ್ಳು ಗುರುತುಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದಾಗ,
ಅಂತಹ ವ್ಯಕ್ತಿಯ ಮನಸ್ಸು ತನ್ನನ್ನು ಆ ವಿಶ್ವ ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುತ್ತದೆ.
ಮತ್ತೊಂದು ಕುತೂಹಲಕಾರಿ ವಿಷಯದೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ನನ್ನೊಂದಿಗೆ ಜೋಡಿಸಿಕೊಳ್ಳಿ.
ಪ್ರಜ್ಞೆಯ ಕುರಿತಾದ ಪ್ರಾಚೀನ ಭಾರತೀಯ ತತ್ತ್ವಜ್ಞಾನಿಗಳ ಈ ಗಹನವಾದ ಆಲೋಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನನಗೆ ತಿಳಿಸಿ.
YouTube ನಲ್ಲಿ ವೀಕ್ಷಿಸಿ
--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್ಗಳಿಲ್ಲ, ಕ್ಲಿಕ್ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್ಗಳಿಲ್ಲ, ಕ್ಲಿಕ್ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.
© Dr. King, Swami Satyapriya 2026

No comments:
Post a Comment